Advertisement

ಹೊಂಡ ಮುಚ್ಚುವ ಕಾಮಗಾರಿಗೆ ಚಾಲನೆ

03:35 AM Nov 23, 2018 | Karthik A |

ಉಪ್ಪಿನಂಗಡಿ: ಗುರುವಾಯನಕೆರೆ – ಉಪ್ಪಿನಂಗಡಿ ನಡುವಣ ರಾಜ್ಯ ಹೆದ್ದಾರಿ ಹೊಂಡ ಮುಚ್ಚುವ ಕಾಮಗಾರಿ ಭರದಿಂದ ಸಾಗುತ್ತಿದೆ. ವಾರದ ಹಿಂದಷ್ಟೇ ಉದಯವಾಣಿ – ಸುದಿನ ಈ ಕುರಿತು ಸಚಿತ್ರ ವರದಿ ಪ್ರಕಟಿಸಿದ ಬೆನ್ನಲ್ಲೇ ಕಾಮಗಾರಿಗೆ ಚಾಲನೆ ದೊರೆತಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ 18 ಕೋಟಿ ರೂ. ಅನುದಾನದಲ್ಲಿ ಸರಕಾರ ರಸ್ತೆ ವಿಸ್ತರಣೆಗೊಳಿಸುವ ಕಾಮಗಾರಿಯನ್ನು ಮಂಜೂರುಗೊಳಿಸಿತ್ತು. ಗುತ್ತಿಗೆದಾರರೇ ಎರಡು ವರ್ಷಗಳ ಕಾಲ ರಸ್ತೆಯನ್ನು ನಿರ್ವಹಿಸಬೇಕೆಂಬ ನಿಬಂಧನೆ ವಿಧಿಸಲಾಗಿತ್ತು. ಈ ಬಾರಿ ಮುಂಗಾರು ಮಳೆಯಿಂದಾಗಿ ರಸ್ತೆಯಲ್ಲಿ ಹೊಂಡಗಳು ತುಂಬಿದ್ದು, ಕೆಲವು ಕಡೆ ತಡೆಗೋಡೆ ಕುಸಿದು ವಾಹನ ಸಂಚಾರಕ್ಕೆ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿತ್ತು.

Advertisement

ಸಾರ್ವಜನಿಕರ ದೂರಿನ ಮೇರೇಗೆ ಬೆಳ್ತಂಗಡಿ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ ಶಿವಪ್ರಸಾದ್‌ ಅಜ್ರಿ ಅವರನ್ನು ಸಂಪರ್ಕಿಸಿದಾಗ, ತತ್‌ಕ್ಷಣವೇ ಎಚ್ಚೆತ್ತ ಅವರು, ತೇಪೆ ಕಾರ್ಯ ಆರಂಭಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ. ಈಗ 9 ಕಿ.ಮೀ. ರಸ್ತೆಯ ದುರಸ್ತಿ ಕಾಮಗಾರಿ ಮುಗಿದಿದ್ದು, ಮುಂದಿನ 10 ದಿನಗಳಲ್ಲಿ ಉಪ್ಪಿನಂಗಡಿ ಹೆದ್ದಾರಿ ಇಲಾಖೆಯ ಗಡಿ ತನಕ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಅಜ್ರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next