Advertisement

Road Mishap: ನಂದಿಕೂರು; ಬೈಕ್‌ – ಬಸ್‌ ಅಪಘಾತ; ಸವಾರ ಮೃತ್ಯು

11:40 AM Sep 13, 2023 | Team Udayavani |

ಪಡುಬಿದ್ರಿ: ಬೈಕ್‌ – ಬಸ್‌ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ‌ ವಾಹನ ಸವಾರ ಸಾವನ್ನಪ್ಪಿರುವ ಘಟನೆ ನಂದಿಕೂರು ಮುದರಂಗಡಿ ಜಂಕ್ಷನ್ ನಲ್ಲಿ ಬುಧವಾರ(ಸೆ.13 ರಂದು) ಮುಂಜಾನೆ ನಡೆದಿದೆ.

Advertisement

ಕಾರ್ಕಳ ಅಜೆಕಾರು ನಿವಾಸಿ ಅಶ್ವಿತ್ ಶೆಟ್ಟಿ(24) ಮೃತ ಯುವಕ.

ಅಶ್ವಿತ್ ಶೆಟ್ಟಿ(೩೪) ಅವರು ಯೂ ಟ್ಯೂಬ್ ಬ್ಲಾಗರ್ ಹಾಗೂ ಅಜೆಕಾರಿನ ಟೆಂಪೋ ಚಾಲಕ ಮಾಲಕರೂ ಆಗಿದ್ದರು.
ಹವ್ಯಾಸಿ ಬೈಕ್ ಸವಾರರಾಗಿದ್ದ ಅಶ್ವಿತ್ ಅವರು ತಿಂಗಳ ಹಿಂದಷ್ಟೇ ಬೈಕಲ್ಲಿಯೇ ಜಮ್ಮು ಕಾಶ್ಮೀರದ ಲಡಾಖ್ ಗೂ ಹೋಗಿ ಬಂದಿದ್ದರು. ಇಂದು ಅಜೆಕಾರಿನಿಂದ ಬೈಕ್ ಸರ್ವೀಸ್ ಗೆ ಹೋಗುತ್ತಿದ್ದರೆನ್ನಲಾಗಿದೆ.

ಅವಿವಾಹಿತರಾಗಿದ್ದ ಮೃತ ಅಶ್ವಿತ್ ತನ್ನ ತಾಯಿ, ಅಣ್ಣ ಹಾಗೂ ಅಕ್ಕನನ್ನು ಅಗಲಿದ್ದಾರೆ. ಅಪಘಾತದ ರಭಸಕ್ಕೆ ಅಶ್ವಿತ್ ಅವರ ದೇಹವು ಬಸ್ ಮೈನ್ ಆಕ್ಸಿಲ್ ನಲ್ಲಿ ಸಿಲುಕಿಕೊಂಡಿದ್ದುದನ್ನು ಮತ್ತೆ ಬಸ್ ನ ಹಿಂದಕ್ಕೆ ಚಲಾಯಿಸಿ ಅಶ್ವಿತ್ ದೇಹವನ್ನು ಹೊರತೆಗೆಲಾಗಿತ್ತು. ಬಸ್ ಗೆ ಬೈಕ್ ಢಿಕ್ಕಿ ಹೊಡೆದಿರುವುದಷ್ಟೇ ಕೇಳಿಸಿತ್ತಲ್ಲದೆ ಸವಾರನ ಯಾವುದೇ ಬೊಬ್ಬೆ ಕೇಳಿಸದೆ ಕ್ಷಣಾರ್ಧದಲ್ಲೇ ಅಶ್ವಿತ್ ಪ್ರಾಣಪಕ್ಷಿಯು ಹಾರಿಹೋಗಿತ್ತು ಎಂಬುದಾಗಿ ಪ್ರತ್ಯಕ್ಷದರ್ಶಿಯೋರ್ವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next