Advertisement
ಬೆಂಕಿಯಿಂದ ಮೂವರು ರಕ್ಷಣೆ: ಇತ್ತೀಚಿಗೆ ತಾಲೂಕಿನ ಹುಲುಸಗುಂದಿ ಬಳಿ ಹುರುಳಿ ಸಿಪ್ಪೆ ಮಾರುತಿ ಕಾರಿನ ಇಂಜಿನಿಗೆ ಸಿಕ್ಕಿಕೊಂಡ ಪರಿಣಾಮವಾಗಿ ಹೊತ್ತಿ ಉರಿದಿತ್ತು. ಇದೇ ರೀತಿಯಾಗಿ ಸೋಮಹಳ್ಳಿ ರಸ್ತೆಯಿಂದ ಕನಕಗಿರಿಗೆ ಹೋಗುವ ರಸ್ತೆಯಲ್ಲಿ ಕಾರಿಗೆ ಹುರುಳಿ ಸಿಪ್ಪೆ ಸಿಕ್ಕಿ ಬೆಂಕಿ ಹೊತ್ತಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ನೀರು ಹಾಕಿ, ಮೂವರನ್ನು ರಕ್ಷಣೆ ಮಾಡಿದ್ದರು.
Related Articles
Advertisement
ಸಾಮೂಹಿಕ ಕಣ ನಿರ್ಮಿಸಿಲ್ಲ: ಪ್ರತಿ ವರ್ಷವೂ ಹುರುಳಿ ಕಟಾವು ಸಂದರ್ಭದಲ್ಲಿ ಇದು ಮರುಕಳಿಸುತ್ತಿದ್ದರೂ ಕೃಷಿ ಇಲಾಖೆ ಎಲ್ಲಾ ಗ್ರಾಮಗಳಲ್ಲಿಯೂ ಸಾಮೂಹಿಕ ಒಕ್ಕಣೆ ಕಣ ನಿರ್ಮಿಸಿಕೊಟ್ಟಿಲ್ಲ. ರಸ್ತೆಯ ಮೇಲೆ ಹಾಕದಂತೆ ಲೋಕೋಪಯೋಗಿ ಇಲಾಖೆ. ಗ್ರಾಮ ಪಂಚಾಯ್ತಿ, ಪೊಲೀಸ್ ಇಲಾಖೆ ತಿಳಿಸಿದ್ದರೂ ಸಹ ರೈತರು ಎಚ್ಚೆತ್ತುಕೊಳ್ಳುತ್ತಿಲ್ಲ. ಹೀಗಾಗಿ ಪಟ್ಟಣ ಠಾಣೆಯಲ್ಲಿ ರಸ್ತೆಯಲ್ಲೇ ಒಕ್ಕಣೆ ಮಾಡುತ್ತಿದ್ದ ಎಂಟು ಮಂದಿ ರೈತರ ವಿರುದ್ಧ ದೂರು ದಾಖಲಾಗಿದೆ.
ನರೇಗಾ ಯೋಜನೆಯಲ್ಲಿ ಸ್ವಂತ ಕಣ ನಿರ್ಮಿಸಲು ಇಲಾಖೆಯಲ್ಲಿ ಅನುದಾನವಿದೆ. ಆದರೂ, ಇದನ್ನು ಉಪಯೋಗಿಸಿಕೊಳ್ಳುತ್ತಿಲ್ಲ. ಗ್ರಾಮ ಪಂಚಾಯ್ತಿಗಳು ಸ್ಥಳಾವಕಾಶ ನೀಡಿ, ಸ್ವಲ್ಪ ಅನುದಾನ ನೀಡಿದರೆ ಸಾಮೂಹಿಕ ಕಣಗಳನ್ನು ನಿರ್ಮಿಸಬಹುದು. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.-ವೆಂಕಟೇಶ್, ಸಹಾಯಕ ಕೃಷಿ ನಿರ್ದೇಶಕ ರಸ್ತೆಯಲ್ಲಿ ಒಕ್ಕಣೆ ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಮತ್ತು ವಾಹನಗಳಿಗೆ ಬೆಂಕಿ ಬಿದ್ದು ಆಗುತ್ತಿರುವ ಅನಾಹುತ ತಪ್ಪಿಸುವ ದೃಷ್ಟಿಯಿಂದ ಈಗಾಗಲೇ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ. ನೂರಾರು ರೈತರಿಗೆ ಈ ಬಗ್ಗೆ ಅರಿವು ಮೂಡಿಸಿದ್ದರೂ ಸಹ ಪದೇ ಪದೇ ರಸ್ತೆಯಲ್ಲಿ ಒಕ್ಕಣೆ ಮಾಡಿ, ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಇನ್ನಾದರೂ ರಸ್ತೆಯಲ್ಲಿ ಒಕ್ಕಣೆ ಮಾಡದೇ ಸೂಕ್ತ ಸ್ಥಳದಲ್ಲಿ ಮಾಡಿ, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ರೈತರು ಸಹಕರಿಸಬೇಕು.
-ಲತೇಶ್ ಕುಮಾರ್, ಎಸ್ಐ, ಪಟ್ಟಣ ಪೊಲೀಸ್ ಠಾಣೆ * ಸೋಮಶೇಖರ್