Advertisement

ಉಡುಪಿ-ಮಣಿಪಾಲ ಕಾಮಗಾರಿ: ಮಾರ್ಗ ಬದಲಾವಣೆ  

04:10 AM Nov 17, 2018 | Team Udayavani |

ಉಡುಪಿ: ಕಡಿಯಾಳಿ- ಮಣಿಪಾಲ ರಾ.ಹೆ.ಯಲ್ಲಿ ಕಾಮಗಾರಿ ನಡೆಯುತ್ತಿರುವ ಕಾರಣ ಸಂಚಾರ ವ್ಯವಸ್ಥೆ ತಾತ್ಕಾಲಿಕ ಬದಲಾವಣೆ ಮಾಡಿ ಜಿಲ್ಲಾಧಿಕಾರಿಯವರು ಅಧಿಸೂಚನೆ ಹೊರಡಿಸಿದ್ದಾರೆ.

Advertisement

– ಉಡುಪಿಯಿಂದ ಮಣಿಪಾಲ, ಕಾರ್ಕಳ, ಶಿವಮೊಗ್ಗ ಮೊದಲಾದೆಡೆ ಹೋಗುವ ಬಸ್ಸುಗಳು ಎಂದಿನಂತೆ ಸರ್ವಿಸ್‌ ಬಸ್‌ ನಿಲ್ದಾಣದಿಂದ ಸಿಟಿ ಬಸ್‌ ನಿಲ್ದಾಣ, ಕಲ್ಸಂಕ, ಕಡಿಯಾಳಿ, ಎಂಜಿಎಂ ಮಾರ್ಗವಾಗಿ ಸಂಚರಿಸಬೇಕು. 

– ಮಣಿಪಾಲ ಕಡೆಯಿಂದ ಉಡುಪಿಗೆ ಬರುವ ಎಲ್ಲ ಬಸ್ಸುಗಳು ಎಂಜಿಎಂ, ಸುಧೀಂದ್ರತೀರ್ಥ ಮಾರ್ಗದಿಂದ ಬಲ ತಿರುವು ಪಡೆದು ಶಾರದಾ ಮಂಟಪದಿಂದ ಬೀಡಿನಗುಡ್ಡೆ, ಮಿಶನ್‌ ಕಂಪೌಂಡ್‌, ಲಯನ್ಸ್‌ ಸರ್ಕಲ್‌ ಮೂಲಕ ಬಸ್‌ ನಿಲ್ದಾಣಕ್ಕೆ ತಲುಪಬೇಕು. 

– ಉಡುಪಿಯಿಂದ ಮಣಿಪಾಲಕ್ಕೆ ಹೋಗುವ ಮತ್ತು ಮಣಿಪಾಲದಿಂದ ಉಡುಪಿಗೆ ಬರುವ ಇತರ ವಾಹನಗಳು ಏಕಮುಖ ಸಂಚಾರ ಬದಲಿಗೆ ದ್ವಿಮುಖ ಸಂಚಾರ ವ್ಯವಸ್ಥೆಯಲ್ಲಿ ತೆರಳಬೇಕು.

ಈ ಕುರಿತು ಎಸ್‌ಪಿ ಕಚೇರಿಯಲ್ಲಿ ಕೆಎಸ್ಸಾರ್ಟಿಸಿ ಅಧಿಕಾರಿಗಳು, ಸಿಟಿ ಬಸ್‌ ಮಾಲಕ/ ಚಾಲಕ ಸಂಘ, ಬಸ್‌ ಏಜೆಂಟರ ಸಂಘದವರ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತಳೆದಂತೆ ಮಾರ್ಗ ಬದಲಾವಣೆಗೆ ಎಸ್‌ಪಿಯವರು ಕೋರಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next