Advertisement

ರಸ್ತೆ ಅಪಘಾತ:ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಳಗಿ ಸಾವು

01:00 AM Mar 20, 2019 | Team Udayavani |

ಮಡಿಕೇರಿ: ಕೊಡಗು ಜಿಲ್ಲಾ ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಅವರು ಮಡಿಕೇರಿ ಸಮೀಪದ ಮೇಕೇರಿಯ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.  

Advertisement

ಮಡಿಕೇರಿಯಿಂದ ಸಂಪಾಜೆ ಕಡೆಗೆ ಕಾರಿನ‌ಲ್ಲಿ ಹೊರಟಿದ್ದ ಕಳಗಿ ಅವರಿದ್ದ ಕಾರಿಗೆ ಲಾರಿಯೊಂದು ಢಿಕ್ಕಿಯಾದ ಪರಿಣಾಮವಾಗಿ ಅವರು ತೀವ್ರ ಗಾಯಗೊಂಡು ಸಾವನ್ನಪ್ಪಿದರು. ಸಂಪಾಜೆ ಗ್ರಾಪಂ ಮಾಜಿ ಸದಸ್ಯರು ಪಯಸ್ವಿನಿ ಸಹಕಾರಿ ಬ್ಯಾಂಕಿನ ಅಧ್ಯಕ್ಷರೂ ಆಗಿರುವ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಳಗಿ ಬಾಲಚಂದ್ರ ಅವರು ಚುನಾವಣೆ ನಿಮಿತ್ತ ಸಮಾಲೋಚನೆಗಾಗಿ ಮಂಗಳವಾರ  ಮಡಿಕೇರಿಗೆ ಹೋಗಿದ್ದರು. ಸಂಜೆ ಅವರು ಮಡಿಕೇರಿಯಿಂದ ಹಿಂದಿರುಗುತ್ತಿರುವಾಗ ಅಪಘಾತ ಸಂಭವಿಸಿದೆ.. ಸಂಪಾಜೆ ಪರಿಸರದ ಭರವಸೆಯ ನಾಯಕರಾಗಿದ್ದ ಕಳಗಿ ಬಾಲಚಂದ್ರ ಅವರ ಅಪಘಾತದ ಸುದ್ದಿ ತಿಳಿದು ಅವರ ಪಕ್ಷದ ಕಾರ್ಯಕರ್ತರು ಬಂಧುಗಳು ಮತ್ತು ಹಿತೈಷಿಗಳು ತೀವ್ರ ಆಘಾತಕ್ಕೊಳಗಾಗಿ¨ªಾರೆ  ಬಾಲಚಂದ್ರ ಕಳಗಿ ಅವರು ಸಂಪಾಜೆ ಭಾಗದಲ್ಲಿ ಸ್ನೇಹಜೀವಿಯಾಗಿ, ಪರೋಪಕಾರಿಯಾಗಿ ಪರಿಚಿತರು.ಕಳೆದ ಆಗಸ್ಟ… ನಲ್ಲಿ ಕೊಡಗು ಪ್ರಾಕೃತಿಕ  ವಿಕೋಪ ಸಂದರ್ಭದಲ್ಲಿ ಸಂಪಾಜೆ, ಕಲ್ಲುಗುಂಡಿ ಪರಿಹಾರ ಕೇಂದ್ರಗಳಲ್ಲಿ ಆರಂಭದ ದಿನದಿಂದ ಕೊನೆ ತನಕ ಸಂತ್ರಸ್ತರ ಜತೆ ಇದ್ದು, ಅವರಿಗೆ ಎÇÉಾ ವ್ಯವಸ್ಥೆಯನ್ನು ಕಲ್ಪಿಸಲುನೆರವಾದ ವ್ಯಕ್ತಿ.

Advertisement

Udayavani is now on Telegram. Click here to join our channel and stay updated with the latest news.

Next