Advertisement

ರಸ್ತೆ ಅಪಘಾತ: ಕನ್ನಡ, ತಮಿಳು ಕಿರುತೆರೆ ನಟಿ ಸಾವು

12:00 PM May 06, 2017 | Team Udayavani |

ವೆಲ್ಲೂರು: ಕನ್ನಡ ಮತ್ತು ತಮಿಳು ಕಿರು ತೆರೆಯಲ್ಲಿ ಜನಪ್ರಿಯತೆ ಪಡೆದಿರುವ ನಟಿ ರೇಖಾ ಸಿಂಧೂ (22)
ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಅಸುನೀಗಿದ್ದಾರೆ. ಚೆನ್ನೈನಿಂದ ಬೆಂಗಳೂರಿಗೆ ಕಾರಿನಲ್ಲಿ
ಬರುತ್ತಿದ್ದ ವೇಳೆ ನೇತ್ರಂಪಲ್ಲಿ ಎಂಬಲ್ಲಿ ಕಾರಿನ ಚಾಲಕ ತೂಕಡಿಸಿದ್ದರಿಂದ ನಿಯಂತ್ರಣ ತಪ್ಪಿ ಈ ಅಪಘಾತ ನಡೆದಿದೆ. ಇದರಿಂದಾಗಿ ರೇಖಾ ಸಿಂಧೂ ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ನೇತ್ರಂಪಲ್ಲಿ ಠಾಣೆ ಪೊಲೀಸರು ತಿಳಿಸಿದ್ದಾರೆ.

Advertisement

ಬೆಂಗಳೂರ ಮೂಲದ ರೇಖಾ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಅವರ ಜತೆಗೆ ಕಾರಿನಲ್ಲಿ ಇದ್ದ ಅಭಿಶೇಕ್‌ ಕುಮಾರನ್‌ (22), ಜಯಂಕಂದ್ರನ್‌ (23), ರಕ್ಷಣ್‌ (20) ಎಂಬುವರೂ ಅಸುನೀಗಿದ್ದಾರೆ. ಅವರ ನಿಧನಕ್ಕೆ ಅಭಿಮಾನಿಗಳು ಟ್ವಿಟರ್‌ ಮತ್ತು ಫೇಸ್‌ಬುಕ್‌ನಲ್ಲಿ ಶೋಕ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ರೇಖಾ ಕೃಷ್ಣಪ್ಪ ಎಂಬ ಮತ್ತೂಬ್ಬ ಕಿರು ತೆರೆ ನಟಿ ಅಪಘಾತದಲ್ಲಿ ಅಸುನೀಗಿದ್ದಾರೆಂದು ಭಾವಿಸಿ ಹಲವರು ಅವರ ಹೆಸರಿನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಶೃಂಗೇರಿಯಲ್ಲಿರುವ ರೇಖಾ ಕೃಷ್ಣಪ್ಪ ಫೇಸ್‌ಬುಕ್‌ನಲ್ಲಿ “ಅಪಘಾತದಲ್ಲಿ ನಾನು ಅಸುನೀಗಿಲ್ಲ. ಅದು ಬೇರೆ ಹೆಸರಿನ ನಟಿ’ ಎಂದು ಬರೆದುಕೊಂಡದ್ದು ಮಾತ್ರವಲ್ಲದೆ ವಿಡಿಯೋ ಕೂಡ ಅಪ್‌ ಲೋಡ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next