Advertisement

ವಿನೋದ್‌ ಖನ್ನಾ ಅಂತ್ಯಕ್ರಿಯೆಗೆ ಕೈಕೊಟ್ಟ ಹೊಸ ನಟರು : ರಿಷಿ ಕಿಡಿ

10:55 AM Apr 28, 2017 | Team Udayavani |

ಮುಂಬಯಿ : ಅಗಲಿದ ಬಾಲಿವುಡ್‌ ನಟ, ಸಂಸದ ವಿನೋದ್‌ ಖನ್ನಾ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳದ ಬಾಲಿವುಡ್‌ನ‌ ಹೊಸ ತಲೆಮಾರಿನ ನಟರ ವಿರುದ್ಧ ಹಿರಿಯ ನಟ ರಿಷಿ ಕಪೂರ್‌ ಕಿಡಿ ಕಾರಿದ್ದಾರೆ.

Advertisement

ವಿನೋದ್‌ ಖನ್ನಾ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಿನ್ನೆ ಗುರುವಾರ ರಾತ್ರಿ ವೋರ್ಲಿಯ ಬಂಗಾಂಗ ರುದ್ರಭೂಮಿಯಲ್ಲಿ ನಡೆದಿತ್ತು.

ವಿನೋದ್‌ ಖನ್ನಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳದ ಈಗಿನ ತಲೆಮಾರಿನ ನಟರು ಗೌರವಿಸುವುದನ್ನು ಕಲಿಯಬೇಕು; ನಾಳೆ ನಾವು ಸತ್ತಾಗ ನಮಗೆ ಹೆಗಲು ಕೊಡಲು ಯಾರೂ ಬರುವುದಿಲ್ಲ ಎಂಬುದನ್ನು ನಾವು ತಿಳಿದಿರಬೇಕು ಎಂದು ರಿಷಿ ಕಪೂರ್‌ ಅತ್ಯಂತ ಕಟುವಾಗಿ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. 

ರಿಷಿ ಕಪೂರ್‌ ಅವರು ಟ್ವಿಟರ್‌ನಲ್ಲಿ ಹೀಗೆ ಬರೆದಿದ್ದಾರೆ : 

“ಇದು ನಿಜಕ್ಕೂ ನಾಚಿಕೆಗೇಡಿನ ವಿಷಯ. ಈ ತಲೆಮಾರಿನ ಯಾವೊಬ್ಬ ನಟನೂ ವಿನೋದ್‌ ಖನ್ನಾ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬರಲಿಲ್ಲ. ಖನ್ನಾ ಜತೆಗೆ ನಟಿಸಿದ್ದ ಈಗಿನ ಯಾವೊಬ್ಬ ನಟನೂ ಬಾರದೇ ಇರುವುದು ದುಃಖಕರ. “ನಾನು ಸತ್ತಾಗ, ನಾನು ಸಿದ್ಧನಿರಬೇಕು; ನನಗೆ ಯಾರೂ ಹೆಗಲು ಕೊಡುವುದಿಲ್ಲ ಅಂತ ತಿಳಿದಿರಬೇಕು. ಈಗಿನ ತಥಾಕಥಿತ ನಟರ ಬಗ್ಗೆ ನಿಜಕ್ಕೂ ನನಗೆ ಕೋಪ ಬಂದಿದೆ. ನನ್ನ ಹೆಂಡತಿ, ಮಗ ರಣಬೀರ್‌ ವಿದೇಶದಲ್ಲಿದ್ದಾರೆ; ಹಾಗಾಗಿ ಅವರು ಅಂತ್ಯಕ್ರಿಯೆಗೆ ಬಂದಿಲ್ಲ. ನಿನ್ನೆ ರಾತ್ರಿಯಷ್ಟೇ ಪ್ರಿಯಾಂಕಾ ಚೋಪ್ರಾಳ ಪಾರ್ಟಿಯಲ್ಲಿ ಭಾಗವಹಿಸಿದ್ದ ಅದೆಷ್ಟೋ ಚಮ್‌ಚಾ ಜನರನ್ನು ನಾನು ಭೇಟಿಯಾಗಿದ್ದೇನೆ; ಆದರೆ ಇವತ್ತು ವಿನೋದ್‌ ಅಂತ್ಯಕ್ರಿಯೆಗೆ ಬಂದವರು ಕೆಲವೇ ಕೆಲವರು’. 

Advertisement

ಅಂದ ಹಾಗೆ ವಿನೋದ್‌ ಖನ್ನಾ ಅಂತ್ಯಕ್ರಿಯೆಯಲ್ಲಿ ನಿನ್ನೆ ಪಾಲ್ಗೊಂಡವರಲ್ಲಿ ಪ್ರಮುಖರೆಂದರೆ ಅಮಿತಾಭ್‌ ಬಚ್ಚನ್‌, ಅಭಿಷೇಕ್‌, ರಣಧೀರ್‌ ಕಪೂರ್‌, ಕಬೀರ್‌ ಬೇಡಿ, ಡ್ಯಾನಿ ಡೆಂಜೋಪಾ, ಅರ್ಜುನ್‌ ರಾಮ್‌ಪಾಲ್‌,  ಜಾಕೀ ಶ್ರಾಫ್, ರಮೇಶ್‌ ತೌರಾನಿ, ಸುಭಾಷ್‌ ಘಾಯ್‌, ಎನ್‌ಸಿಪಿ ನಾಯಕ ಪ್ರಫ‌ುಲ್‌ ಪಟೇಲ್‌, ಬಿಜೆಪಿ ಎಂಪಿ ಕಿರಿಟ್‌ಸೋಮಯ್ಯ ಹಾಗೂ ಇತರರು. 

Advertisement

Udayavani is now on Telegram. Click here to join our channel and stay updated with the latest news.

Next