Advertisement

ನಟ-ನಿರ್ದೇಶಕ ರಿಷಭ್‌ ಶೆಟ್ಟಿಗೆ “ಭರವಸೆಯ ನಟ’ಪ್ರಶಸ್ತಿಯ ಗರಿ

12:49 AM Feb 16, 2023 | Team Udayavani |

ಹೊಸದಿಲ್ಲಿ: ಕಾಂತಾರ ಚಿತ್ರದ ಮೂಲಕ ಕರ್ನಾಟಕದ ಪರಂಪರೆ ಹಾಗೂ ಚಂದ ನವನದ ಅದ್ಭುತ ಸಾಮರ್ಥ್ಯ ವನ್ನು ಜಾಗತಿಕ ಮಟ್ಟ ದಲ್ಲಿ ಮತ್ತೊಮ್ಮೆ ನಿರೂಪಿಸಿದ ನಟ-ನಿರ್ದೇಶಕ ರಿಷಭ್‌ ಶೆಟ್ಟಿ, ದಾದಾ ಸಾಹೇಬ್‌ ಫಾಲ್ಕೆ
ಅಂತಾರಾಷ್ಟ್ರೀಯ ಸಿನಿ ಚಿತ್ರೋತ್ಸವ 2023ರ “ಅತ್ಯಂತ ಭರವಸೆಯ ನಟ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Advertisement

ಕಾಂತಾರ ಸಿನೆಮಾ ಕಥೆ ಹಾಗೂ ತಮ್ಮ ಮನೋಜ್ಞ ಅಭಿನಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ರಿಷಭ್‌ ಭರವಸೆಯನ ನಾಯಕ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆಂದು ದಾದಾ ಸಾಹೇಬ್‌ ಫಾಲ್ಕೆ ಅಂತಾರಾಷ್ಟ್ರೀಯ ಸಿನಿ ಚಿತ್ರೋತ್ಸವದ ಸಿಇಒ ಅಭಿಷೇಕ್‌ ಮಿಶ್ರಾ ಪತ್ರದ ಮೂಲಕ ತಿಳಿಸಿದ್ದಾರೆ.

ಫೆ.20ರಂದು ಮುಂಬಯಿಯಲ್ಲಿ ನಡೆಯುವ ಚಿತ್ರೋತ್ಸವದಲ್ಲಿ ರಿಷಭ್‌ ಪ್ರಶಸ್ತಿ ಸ್ವೀಕರಿಸಲಿದ್ದಾರೆ. 2020ರಲ್ಲಿ ದಬ್ಟಾಂಗ್‌ 3 ಚಿತ್ರಕ್ಕೆ ಕಿಚ್ಚ ಸುದೀಪ್‌ ಅವರಿಗೆ ಅತ್ಯಂತ ಭರವಸೆ ನಾಯಕನೆಂಬ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next