Advertisement

ತಾಯಿಯ ಅಂತ್ಯಕ್ರಿಯೆ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಸ್ಕೂಟರ್‌ ಮಗುಚಿ ಬಿದ್ದು ಪುತ್ರ ಸಾವು

10:01 AM Apr 30, 2022 | Team Udayavani |

ಕಾಸರಗೋಡು: ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ವೇಳೆ ಸ್ಕೂಟರ್‌ ಮಗುಚಿ ಬಿದ್ದು ಪುತ್ರ ಸಾವಿಗೀಡಾದ ಘಟನೆ ಎ. 29ರಂದು ಮುಂಜಾನೆ ಸಂಭವಿಸಿದೆ.

Advertisement

ಕೊಯಿಪ್ಪಾಡಿ ಕಡಪ್ಪುರಂ ಕೋಟ್ಟಿಯ ಮುಹಮ್ಮದ್‌ ಹನೀಫ್‌ (42) ಮೃತರು. ಮಂಗಳೂರು ಕೆ.ಸಿ. ರಸ್ತೆ ಸಮೀಪ ತಾಯಿ ವಾಸವಿದ್ದು ಎ. 28ರಂದು ಸಾವಿಗೀಡಾಗಿದ್ದರು.

ಅಂತ್ಯಕ್ರಿಯೆ ಮುಗಿಸಿ ಶುಕ್ರವಾರ ಮುಂಜಾನೆ ಹಿಂದಿರುಗುತ್ತಿದ್ದಾಗ ಆರಿಕ್ಕಾಡಿ ಪರಿಸರ ದಲ್ಲಿ ಸ್ಕೂಟರ್‌ ಮಗುಚಿ ದುರಂತ ಸಂಭವಿಸಿದೆ. ಹನೀಫ್‌ ಸ್ಕೂಟರ್‌ನಲ್ಲಿ ಹಿಂಬದಿ ಸವಾರರಾಗಿದ್ದು, ಸ್ಕೂಟರ್‌ ಚಲಾಯಿಸಿದ ಸಂಬಂಧಿಕ ತಾಜು ಅವರಿಗೆ ಗಾಯಗಳಾಗಿದ್ದು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಂಡದಿಂದ ಯುವಕನಿಗೆ ಹಲ್ಲೆ
ಕಾಸರಗೋಡು: ಪಡನ್ನಕ್ಕಾಡು ಕುರುಂದೂರು ರಂಸೀನ ಮಂಜಿಲ್‌ನ ಅಬ್ದುಲ್‌ ಸಲಾಂ ಅವರ ಪುತ್ರ ಎಂ. ರಾμ(26) ಅವರಿಗೆ ಹಲ್ಲೆ ಮಾಡಿದ ಘಟನೆ ನಡೆದಿದೆ.

ಇಬ್ಬರು ಸೇರಿ ಇರಿದು ಕಬ್ಬಿಣದ ಸರಳುಗಳಿಂದ ಹೊಡೆದು ಗಂಭೀರ ಗಾಯಗೊಳಿಸಿದ್ದಾರೆ. ಇಬ್ಬರ ಮೇಲೆ ಕೇಸು ಈ ಸಂಬಂಧ ಶಾನಿದ್‌ ಮತ್ತು ಶಹಬಾದ್‌ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next