Advertisement

ಚುನಾವಣಾ ಕಣದಿಂದ ನಿವೃತ್ತಿ: ಮಾಜಿ ಶಾಸಕ ಎಸ್.ಕೆ.ಬಸವರಾಜನ್ ದಂಪತಿ ಬಿಜೆಪಿ ಸೇರ್ಪಡೆ

11:06 PM May 04, 2023 | Team Udayavani |

ಚಿತ್ರದುರ್ಗ: ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಶಾಸಜ ಎಸ್.ಕೆ.ಬಸವರಾಜನ್ ಹಾಗು ಅವರ ಪತ್ನಿ ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.

Advertisement

ಗುರುವಾರ ಸಂಜೆ ನಗರದ ರೆಡ್ಡಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸೌಭಾಗ್ಯ ಬಸವರಾಜನ್ ಅವರು ಚುನಾವಣಾ ಕಣದಿಂದ‌ ನಿವೃತ್ತಿ ಹೊಂದಿ, ಬಿಜೆಪಿ ಅಭ್ಯರ್ಥಿ ಜಿ.ಎಚ್.ತಿಪ್ಪಾರೆಡ್ಡಿ ಅವರಿಗೆ ಬೆಂಬಲ ನೀಡುವುದಾಗಿ ತಿಳಿಸಿದರು.

ಈ ವೇಳೆ ಮಾತನಾಡಿದ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ, ನಾನು, ತಿಪ್ಪಾರೆಡ್ಡಿ ರಾಜಕೀಯ ವೈರಿಗಳು ಆದರೆ, ಈಗ ಸ್ನೇಹಿತರಾಗಿದ್ದೇವೆ. ಪರಿಸ್ಥಿತಿಗಳು ಒಂದು ಮಾಡಿವೆ ಎಂದರು.

ಇಬ್ಬರೂ ಶಾಸಕರಾಗಿ ಕೆಲಸ ಮಾಡಿದ್ದೇವೆ. ಯಾವತ್ತೂ ಯಾರೂ ಕೂಡಾ ಗೂಂಡಾಗಿರಿಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದರು. 15 ವರ್ಷಗಳ ಹಿಂದೆ ಈ‌ ಪಕ್ಷಕ್ಕೆ ಬರುವ ಅವಕಾಶ ಒದಗಿ ಬಂದಿತ್ತು.‌ಆದರೆ, ಬೇರೆ ಪಕ್ಷದಲ್ಲಿ ಇದ್ದ ಕಾರಣ ಬಂದಿರಲಿಲ್ಲ ಎಂದು ತಿಳಿಸಿದರು.

Advertisement

ಪಕ್ಷೇತರ ಅಭ್ಯರ್ಥಿಯಾಗಿದ್ದ ಸೌಭಾಗ್ಯ ಬಸವರಾಜನ್ ಮಾತನಾಡಿ, ಸಮಾಜದ ಹಿರಿಯರು ಸಮಾಲೋಚನೆ ಮಾಡಿ ಬಿಜೆಪಿಗೆ ಬೆಂಬಲ ನೀಡುವಂತೆ ಹೇಳಿದ್ದರು.ಚಿತ್ರದುರ್ಗ ಉಳಿಯಬೇಕು. ತಿಪ್ಪಾರೆಡ್ಡಿ ಗೆಲ್ಲಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next