Advertisement

ಕುಲಾಂತರಿ ಆಹಾರ ಬೆಳೆ ಕ್ರಮ ಕೈಗೊಳ್ಳಲು ಮನವಿ

11:26 PM May 10, 2019 | Lakshmi GovindaRaj |

ಬೆಂಗಳೂರು: ಕುಲಾಂತರಿ ಆಹಾರ ಬೆಳೆಗಳು ರಾಜ್ಯದೊಳಗೆ ಬಾರದೆ ಇರುವಂತೆ ನೋಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರಿಗೆ ಎಂಡಿಎನ್‌ ಮಾರ್ಗ ಸಂಘಟನೆ ಮನವಿ ಸಲ್ಲಿಸಿದೆ.

Advertisement

ರಾಜ್ಯಸಭೆ ಸದಸ್ಯ ಎಲ್‌.ಹನುಮಂತಯ್ಯ, ವಿಧಾನಪರಿಷತ್‌ ಸದಸ್ಯ ಮೋಹನ್‌ ಕೊಂಡಜ್ಜಿ, ಕೇಂದ್ರ ಸಾಹಿತ್ಯ ಅಕಾಡೆಮಿ ಮಾಜಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, ಸಂಚಾಲಕ ಕೆ.ಎನ್‌.ನಾಗೇಶ್‌ ಅವರನ್ನೊಳಗೊಂಡ ನಿಯೋಗ, ರಾಜ್ಯದಲ್ಲಿ ಉತ್ಪಾದನೆ/ಮಾರಾಟವಾಗುವ ಮತ್ತು ಇತರೆ ಪ್ರದೇಶಗಳಿಂದ ರಾಜ್ಯಕ್ಕೆ ಬರುವ ಬಿತ್ತನೆ ಬೀಜಗಳ ಮೇಲೆ ನಿಗಾ ಇಡಬೇಕು.

ಯಾವುದೇ ಕಾರಣಕ್ಕೂ ಬಿ.ಟಿ.ಆಹಾರ ಬೆಳೆಗಳ ಬಿತ್ತನೆ ಬೀಜಗಳು ರಾಜ್ಯದೊಳಗೆ ಬಾರದಂತೆ ನೋಡಿಕೊಳ್ಳಬೇಕು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಬೇಕೆಂದು ಆಗ್ರಹಿಸಿದೆ. ಇತ್ತೀಚೆಗೆ ಹರಿಯಾಣ ರಾಜ್ಯದಲ್ಲಿ ಕಾನೂನು ಬಾಹಿರವಾಗಿ ಬಿಟಿ ಬದನೆ ಬೆಳೆದಿರುವುದು ಆತಂಕಕ್ಕೆ ಕಾರಣವಾಗಿದೆ.

ಹೀಗಾಗಿ, ರಾಜ್ಯದ ರೈತರು, ಕೃಷಿ ಪರಿಸರ ಸಂರಕ್ಷಿಸಬೇಕೆಂದು ನಿಯೋಗ ಒತ್ತಾಯಿಸಿದೆ. ಕುಲಾಂತರಿ ಆಹಾರ ಬೆಳೆಗಳ ಅಪಾಯ ಕುರಿತ ಲೇಖನ ಹಾಗೂ ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕುಲಾಂತರಿ ಬದನೆ ಬೆಳೆಯಲು ನಿರಾಕರಿಸಿದ ತೀರ್ಮಾನ ಕೈಗೊಂಡಿದ್ದನ್ನು ಮನವಿ ಪತ್ರದಲ್ಲಿ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next