Advertisement

ಎಂಇಎಸ್‌-ಶಿವಸೇನೆ ನಿಷೇಧಿಸಲು ಮನವಿ

03:23 PM Jan 01, 2022 | Team Udayavani |

ದೇವದುರ್ಗ: ಕನ್ನಡಿಗರ ಮೇಲೆ ಪದೇ-ಪದೇ ದಬ್ಟಾಳಿಕೆ ಮಾಡುತ್ತಿರುವ ಎಂಇಎಸ್‌, ಶಿವಸೇನೆ ಸಂಘಟನೆಗಳು ರಾಜ್ಯ ಸರಕಾರ ಕೊಡಲೇ ನಿಷೇಧಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್‌.ಶಿವರಾಮೇಗೌಡ ಬಣ್ಣ ತಾಲೂಕು ಸಮಿತಿ ಪದಾಧಿಕಾರಿಗಳು ಶುಕ್ರವಾರ ತಹಶೀಲ್ದಾರ್‌ ಶ್ರೀನಿವಾಸ ಚಾಪಲ್‌ ಮುಖಾಂತರ ಸಿಎಂಗೆ ಮನವಿ ಸಲ್ಲಿಸಿದರು.

Advertisement

ಕನ್ನಡಪರ ಸಂಘಟನೆಗಳು ಹೋರಾಟ ಕೈಬಿಟ್ಟು ಗಡುವು ನೀಡಿದೆ. 21 ದಿನದೊಳಗೆ ಎಂಇಎಸ್‌, ಶಿವಸೇನೆ ಸಂಘಟನೆಗಳು ನಿಷೇಧಿಸಬೇಕು. ನೆಲ, ಜಲ, ಗಡಿ ವಿಷಯಗಳ ಕುರಿತು ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆ ಪದೇ-ಪದೇ ಗಡಿ ತಂಟೆಗಳನ್ನು ನೆಪವೊಡ್ಡಿ ಕೋಮು ಸೌಹಾರ್ದತೆ ಉಂಟು ಮಾಡುತ್ತಿವೆ ಎಂದು ದೂರಿದರು.

ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಶ್ರೀನಿವಾಸ ದಾಸರ, ಕಸಾಪ ಮಾಜಿ ಅಧ್ಯಕ್ಷ ಎಚ್‌.ಶಿವರಾಜ, ಮಹಿಳಾ ಘಟಕದ ಅಧ್ಯಕ್ಷೆ ಅಮೃತಾ ಕೆ.ಪಾಟೀಲ್‌, ಸಾವಿತ್ರಿ, ಪದ್ಮಾವತಿ, ಲಕ್ಷ್ಮೀಕಾಂತ್‌ ದಾಸರ ಸೇರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next