Advertisement

ನಚಿಕೇತ್‌ ಕೈಬಿಡಿ: ಆಗ್ರಹ

10:30 AM Apr 16, 2018 | Team Udayavani |

ಹೊಸದಿಲ್ಲಿ: ಬಿಲ್‌ ಆ್ಯಂಡ್‌ ಮೆಲಿಂಡಾ ಗೇಟ್ಸ್‌ ಫೌಂಡೇಶನ್‌ ಗೆ ನಚಿಕೇತ್‌ ಮೋರ್‌ ಭಾರತದ ಪ್ರತಿನಿಧಿಯಾಗಿದ್ದು, ಈ ಸಂಸ್ಥೆಯ ಆರ್ಥಿಕ ವಹಿವಾಟಿನ ಬಗ್ಗೆ ಗೃಹ ಖಾತೆ ತನಿಖೆ ನಡೆಸುತ್ತಿದೆ. ಮೋರ್‌ ಆರ್‌.ಬಿ.ಐ. ನಿರ್ದೇಶಕರೂ ಆಗಿರುವುದರಿಂದ ಹಿತಾಸಕ್ತಿ ಸಂಘರ್ಷ ಉಂಟಾಗುತ್ತಿದೆ. ಹೀಗಾಗಿ ಅವರನ್ನು ಕೈಬಿಡಬೇಕು ಎಂದು ಸ್ವದೇಶಿ ಜಾಗರಣ್‌ ಮಂಚ್‌ನ ಮುಖಂಡ ಅಶ್ವನಿ ಮಹಾಜನ್‌ ಆಗ್ರಹಿಸಿದ್ದಾರೆ.

Advertisement

ಮೋರ್‌ ಪ್ರತಿನಿಧಿಸುವ ಫೌಂಡೇಶನ್‌ ಇಂದಿಗೂ ಅನುದಾನ ಸ್ವೀಕರಿಸುತ್ತಿದೆ. ಭಾರತದ ಆರೋಗ್ಯ ಮತ್ತು ಕೃಷಿ ಕ್ಷೇತ್ರದಲ್ಲಿನ ನೀತಿಗಳ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಸಂಸ್ಥೆ ಕೆಲಸ ಮಾಡುತ್ತಿದೆ ಎಂಬ ಆರೋಪವಿದೆ.

Advertisement

Udayavani is now on Telegram. Click here to join our channel and stay updated with the latest news.

Next