Advertisement

ಸಹೋದರರ ಜತೆಗೂಡಿ ಮತ್ತೆ ಸರಕಾರ: ಜನಾರ್ದನ ರೆಡ್ಡಿ

11:02 PM Apr 10, 2022 | Team Udayavani |

ಹರಪನಹಳ್ಳಿ: ರಾಜ್ಯದಲ್ಲಿ 2023ರ ಚುನಾವಣೆ ಬಳಿಕವೂ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವಂತೆ ಸಹೋದರರ ಜತೆಗೂಡಿ ಶ್ರಮಿಸಲಾಗುವುದು. ಮುಖ್ಯಮಂತ್ರಿಗಳ ಜತೆ ಕೈಜೋಡಿಸಿ ಬಲ ತುಂಬಲಾಗುವುದು ಎಂದು ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಹೇಳಿದರು.

Advertisement

ಶಾಸಕ ಜಿ. ಕರುಣಾಕರರೆಡ್ಡಿ ಅಭಿಮಾನಿ ಬಳಗದಿಂದ ರವಿವಾರ ಹಮ್ಮಿಕೊಂಡಿದ್ದ ಸೀತಾರಾಮ ಕಲ್ಯಾಣ ಮಹೋತ್ಸವ, ಶಾಸಕ ಕರುಣಾಕರ ರೆಡ್ಡಿ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಂದಿನ ವಿಧಾನಸಭಾ ಚುನಾ ವಣೆಯಲ್ಲಿ ಬಿಜೆಪಿ 150ಕ್ಕೂ ಅಧಿ ಕ ಸ್ಥಾನ ಗೆಲ್ಲಲು ಸಿಎಂ ಜತೆ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಸಿದ್ಧನಿದ್ದೇನೆ ಎಂದರು.

ಕರುಣಾಕರ ರೆಡ್ಡಿ ಸಚಿವರು!
ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ರಚನೆಯಾಗಲಿದ್ದು ಆ ಸರಕಾರದಲ್ಲಿ ಹರಪನಹಳ್ಳಿಯ ಶಾಸಕ, ಕುಟುಂಬದ ಹಿರಿಯಣ್ಣ ಕರುಣಾಕರ ರೆಡ್ಡಿ ಅವರು ಸಚಿವರಾಗಬೇಕು. ಆ ಹಿನ್ನೆಲೆಯಲ್ಲಿ ಕ್ಷೇತ್ರದ ಪ್ರತೀ ಹಳ್ಳಿಹಳ್ಳಿಗಳಲ್ಲಿಯೂ ಸುತ್ತಾಡಿ ಅವರೊಂದಿಗೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next