Advertisement

“ರವಿಕೆ ಪ್ರಸಂಗ’ ಚಿತ್ರದ ಪೋಸ್ಟರ್ ಬಂತು; ಸಾಥ್ ನೀಡಿದ ರಚಿತಾ

04:17 PM Jun 17, 2023 | Team Udayavani |

ಈ ಹಿಂದೆ ಕನ್ನಡದಲ್ಲಿ “ಹೋಂ ಸ್ಟೇ’ ಚಿತ್ರದ ಮೂಲಕ ತೆರೆಗೆ ಬಂದಿದ್ದ ಸಂತೋಷ ಕೊಡಂಕೇರಿ ಇದೀಗ “ರವಿಕೆ ಪ್ರಸಂಗ’ ಚಿತ್ರದ ಮೂಲಕ ಮತ್ತೆ ತೆರೆಗೆ ಬರಲು ಸಿದ್ದರಾಗಿದ್ದಾರೆ.

Advertisement

“ದೃಷ್ಟಿ ಮೀಡಿಯಾ’ ಪ್ರೊಡಕ್ಷನ್‌ ಇವರ ಎರಡನೇ ಕಾಣಿಕೆಯಾಗಿರುವ “ರವಿಕೆ ಪ್ರಸಂಗ’ ಚಿತ್ರಕ್ಕೆ ಶಂತನು ಮಹರ್ಷಿ, ನಿರಂಜನ್‌ ಗೌಡ, ಗಿರೀಶ್‌ ಎಸ್‌ ಎಂ, ಶಿವರುದ್ರಯ್ಯ ಎಸ್‌.ವಿ ಬಂಡವಾಳ ಹೂಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಫ‌ಸ್ಟ್‌ಲುಕ್‌ ರಿಲೀಸ್‌ ಆಗಿದ್ದು, ನಟಿ ರಚಿತಾ ರಾಮ್‌ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಫ‌ಸ್ಟ್‌ಲುಕ್‌ ರಿಲೀಸ್‌ ಮಾಡಿ ಶುಭಕೋರಿದ್ದಾರೆ.

ಈ ಚಿತ್ರಕ್ಕೆ ಪಾವನಾ ಸಂತೋಷ್‌ ಕಥೆ ಸಂಭಾಷಣೆ ಬರೆದಿದ್ದು, ಸಂತೋಷ್‌ ಕೊಡಂಕೇರಿ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಈಗಾಗಲೇ ಬಹುತೇಕ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ, ಸೆನ್ಸಾರ್‌ ಪ್ರಕ್ರಿಯೆಗೆ ಸಿದ್ಧವಾಗುತ್ತಿದೆ.

“ರವಿಕೆ ಪ್ರಸಂಗ’ ಒಂದು ಕಂಟೆಂಟ್‌ ಚಿತ್ರ ಎನ್ನುವುದು ಚಿತ್ರತಂಡದ ಮಾತು, ಜೊತೆಯಲ್ಲಿ ಚಿತ್ರದಲ್ಲಿ ಅನುಭವೀ ನಟ-ನಟಿಯರು ಸಹ ಇದ್ದು, ಗೀತಾ ಭಾರತಿ ಭಟ್‌ ನಾಯಕಿಯಾಗಿ ಅಭಿನಯಿಸಿದ್ದಾರೆ.

ಸುಮನ್‌ ರಂಗನಾಥ್‌, ರಾಕೇಶ್‌ ಮಯ್ಯ , ಸಂಪತ್‌ ಮೈತ್ರೇಯ, ಪದ್ಮಜಾ ರಾವ್‌, ಕೃಷ್ಣಮೂರ್ತಿ ಕವತಾರ್‌, ಪ್ರವೀಣ್‌ ಅಥರ್ವ ,ರಘು ಪಾಂಡೇಶ್ವರ್‌ , ಹನುಮಂತೇ ಗೌಡ , ಖುಷಿ ಆಚಾರ್‌ , ಹನುಮಂತ್‌ ರಾವ್‌ ಕೆ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಕಥೆ ಮತ್ತು ಸಂಭಾಷಣೆ ಪಾವನಾ ಸಂತೋಷ್‌, ಚಿತ್ರಕಥೆ, ನಿರ್ದೇಶನ ಸಂತೋಷ್‌ ಕೊಡಂಕೇರಿ, ಮುರಳಿಧರ್‌. ಎನ್‌ ಛಾಯಾಗ್ರಹಣ, ರಘು ಶಿವರಾಮ್‌ ಸಂಕಲನ , ವಿನಯ್‌ ಶರ್ಮಾ ಸಂಗೀತ, ರಮೇಶ್‌ ಕೃಷ್ಣ ಹಿನ್ನಲೆ ಸಂಗೀತ , ಕಿರಣ್‌ ಕಾವೇರಪ್ಪ ಸಾಹಿತ್ಯ ಚಿತ್ರಕ್ಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next