Advertisement

Ranjani Raghavan; ಪ್ರೇಕ್ಷಕರು ಗುರುತಿಸುವಂತೆ ಮಾಡಿದ್ದು ಸೀರಿಯಲ್‌…

04:11 PM Sep 11, 2023 | Team Udayavani |

ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ರಂಜನಿ ರಾಘವನ್‌ ಈಗ ಸಿನಿಮಾಗಳಲ್ಲೂ ಬಿಝಿ. ನಟನೆ ಜೊತೆಗೆ ಬರವಣಿಗೆ ಮೂಲಕವೂ ಗುರುತಿಸಿಕೊಂಡಿರುವ ರಂಜನಿ ರಾಘವನ್‌ ತಮ್ಮ ಹೊಸ ಕನಸುಗಳ ಬಗ್ಗೆ ಇಲ್ಲಿ ಮಾತನಾಡಿದ್ದಾರೆ…

Advertisement

ಇತ್ತೀಚೆಗಷ್ಟೇ “ಕನ್ನಡತಿ’ ಮುಗಿಸಿದ್ದೀರಿ. ಮುಂದಿನ ಯೋಜನೆ ಏನು?

ಸದ್ಯ ಸೀರಿಯಲ್‌ನಿಂದ ಸ್ವಲ್ಪ ಗ್ಯಾಪ್‌ ತೆಗೆದುಕೊಂಡು ಸಿನಿಮಾದ ಕಡೆಗೆ ಹೋಗುತ್ತಿದ್ದೇನೆ. ಈ ವರ್ಷ ಸೀರಿಯಲ್‌ನಲ್ಲಿ ಕಾಣಿಸಿಕೊಳ್ಳುವ ಬದಲು ಒಂದಷ್ಟು ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಅಂದುಕೊಂಡಿದ್ದೇನೆ. ಈಗಾಗಲೇ ಎರಡು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಇನ್ನೊಂದು ಸಿನಿಮಾದ ಶೂಟಿಂಗ್‌ ಅಂತಿಮ ಹಂತದಲ್ಲಿದೆ.

ಸೀರಿಯಲ್‌ ಮತ್ತು ಸಿನಿಮಾ ಎರಡರಲ್ಲಿ ನಿಮ್ಮ ಆಯ್ಕೆ ಯಾವುದು?

ಸದ್ಯದ ಮಟ್ಟಿಗೆ ಹೇಳುವುದಾದರೆ, ನನ್ನ ಆಯ್ಕೆ ಸಿನಿಮಾ. ಹಾಗಂತ ಸೀರಿಯಲ್‌ ಬಗ್ಗೆ ನನಗೆ ಆಸಕ್ತಿ ಇಲ್ಲ ಅಥವಾ ಸೀರಿಯಲ್‌ ಇಷ್ಟವಿಲ್ಲ ಅಂತಲ್ಲ. ಇಷ್ಟು ವರ್ಷಗಳ ಕಾಲ ಸೀರಿಯಲ್‌ನಲ್ಲೇ ಕೆಲಸ ಮಾಡಿದ್ದೇನೆ. ನನ್ನನ್ನು ಪ್ರೇಕ್ಷಕರು ಗುರುತಿಸುವಂತೆ ಮಾಡಿದ್ದು ಸೀರಿಯಲ್‌. ಈಗ ಹೊಸ ಬದಲಾವಣೆಗಾಗಿ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದೇನೆ.

Advertisement

ಅಭಿನಯಿಸುತ್ತಿರುವ ಸಿನಿಮಾಗಳ ಬಗ್ಗೆ ಏನು ಹೇಳುತ್ತೀರಿ?

ಸದ್ಯಕ್ಕೆ ಕನ್ನಡದಲ್ಲಿ ಮೂರು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದೇನೆ. “ಸತ್ಯಂ’ ಮತ್ತು “ಆದ್ದರಿಂದ’ ಎರಡು ಸಿನಿಮಾಗಳ ಕೆಲಸಗಳು ಮುಗಿದಿದ್ದು, ಬಿಡುಗಡೆಗೆ ರೆಡಿಯಾಗಿವೆ. ಇನ್ನೊಂದು ಸಿನಿಮಾದಲ್ಲಿ ಆದಿತ್ಯ ಜೊತೆಗೆ ಅಭಿನಯಿಸುತ್ತಿದ್ದೇನೆ. ಈ ಸಿನಿಮಾದ ಟೈಟಲ್‌ ಇನ್ನೂ ಫೈನಲ್‌ ಆಗಿಲ್ಲ. ಸಸ್ಪೆನ್ಸ್‌-ಥ್ರಿಲ್ಲರ್‌ ಸಬ್ಜೆಕ್ಟ್‌ ನ ಈ ಸಿನಿಮಾದ ಶೂಟಿಂಗ್‌ ಶೇ. 75ರಷ್ಟು ಈಗಾಗಲೇ ಪೂರ್ಣವಾಗಿದೆ.

ಯಾವಾಗ ನಿಮ್ಮನ್ನು ಮತ್ತೆ ಬಿಗ್‌ ಸ್ಕ್ರೀನ್‌ನಲ್ಲಿ ನೋಡಬಹುದು?

ಆದಷ್ಟು ಬೇಗ ನೋಡಬಹುದು. ನನಗೆ ತಿಳಿದಿರುವ ಮಟ್ಟಿಗೆ ಈ ವರ್ಷದ ಕೊನೆಯೊಳಗೆ ನಾನು ಅಭಿನಯಿಸಿರುವ ಒಂದು ಅಥವಾ ಎರಡು ಸಿನಿಮಾಗಳು ಬಿಡುಗಡೆಯಾಗಬಹುದು. ಆದಿತ್ಯ ಅವರ ಜೊತೆ ಅಭಿನಯಿಸುತ್ತಿರುವ ಸಿನಿಮಾ ಬಹುಶಃ ಈ ವರ್ಷದ ಕೊನೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆಯಿದೆ.

ಅಭಿನಯ ಬಿಟ್ಟು ಬೇರೆ ಏನಾದರೂ ಯೋಚನೆಗಳಿದೆಯಾ?

ಖಂಡಿತಾ… ನನ್ನನ್ನು ನಾನು ಹೊಸ ರೀತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಯಾವಾಗಲೂ ಬಯಸುತ್ತೇನೆ. ಹಾಗಾಗಿಯೇ ಸೀರಿಯಲ್‌ ಮಾಡುತ್ತಿರುವಾಗಲೇ ಪುಸ್ತಕಗಳ ಬರವಣಿಗೆಯಲ್ಲಿ ತೊಡಗಿಸಿಕೊಂಡೆ. ಈಗಾಗಲೇ ಎರಡು ಕೃತಿಗಳು ಬಿಡುಗಡೆಯಾಗಿದ್ದು, ಎರಡೂ ಕೂಡ ಬೆಸ್ಟ್‌ ಸೆಲ್ಲರ್ ಅಂಥ ಕರೆಸಿಕೊಂಡಿವೆ. ಸದ್ಯ ಸಿನಿಮಾ ಸ್ಕ್ರಿಪ್ಟ್ ವರ್ಕ್‌ ಮಾಡುತ್ತಿದ್ದೇನೆ. ಭವಿಷ್ಯದಲ್ಲಿ ಸಿನಿಮಾ ನಿರ್ದೇಶನ ಮಾಡುವ ಯೋಚನೆಯೂ ಇದೆ.

ಇಷ್ಟು ವರ್ಷಗಳ ಅಭಿನಯದ ಪ್ರಯಾಣದ ಬಗ್ಗೆ ಏನಂತೀರಿ?

“ಪುಟ್ಟಗೌರಿ ಮದುವೆ’ ನನ್ನನ್ನು ಒಬ್ಬಳು ಕಲಾವಿದೆಯಾಗಿ ಪ್ರೇಕ್ಷಕರಿಗೆ ಪರಿಚಯಿಸಿತು. ಮೊದಲ ಸೀರಿಯಲ್‌ನಲ್ಲೇ ಒಳ್ಳೆಯ ಮನ್ನಣೆ, ಮೆಚ್ಚುಗೆ ವ್ಯಕ್ತವಾಯಿತು. ಅದಾದ ನಂತರ “ಕನ್ನಡತಿ’ ಸೀರಿಯಲ್‌ ನನ್ನನ್ನು ಮತ್ತೂಂದು ರೀತಿ ಗುರುತಿಸುವಂತೆ ಮಾಡಿತು. ಇಷ್ಟವರ್ಷಗಳ ಅಭಿನಯದ ಪ್ರಯಾಣ ತುಂಬ ಖುಷಿ ಕೊಟ್ಟಿದೆ. ಸಾಕಷ್ಟು ಕಲಿತಿದ್ದೇನೆ. ಅನೇಕರ ಸಹಕಾರ, ಬೆಂಬಲದಿಂದ ಇದೆಲ್ಲ ಸಾಧ್ಯವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next