Advertisement

ರಾಮನಗರ : ಕೆರೆಯಲ್ಲಿ ಮುಳುಗಿ ಹೆಲ್ತ್‌ ಇನ್ಸ್‌ಪೆಕ್ಟರ್‌ ಸಾವು

10:01 AM Apr 26, 2019 | Vishnu Das |

ರಾಮನಗರ: ಸ್ನೇಹಿತರೊಂದಿಗೆ ಪಾನಗೋಷ್ಠಿ ಮುಗಿಸಿ ಕೆರೆಯಲ್ಲಿ ಈಜಲು ತೆರಳಿದ್ದ ಆರೋಗ್ಯ ಅಧಿಕಾರಿಯೊಬ್ಬರು ಕಾಲಿಗೆ ಬಳ್ಳಿ ಸಿಲುಕಿ ನೀರು ಪಾಲಾದ ಘಟನೆ ಬುಧವಾರ ಸಂಜೆ ಸಿಂಗ್ರಭೋವಿ ಕೆರೆಯಲ್ಲಿ ನಡೆದಿದೆ.

Advertisement

ಮೃತಪಟ್ಟ ಇನ್ಸ್‌ಪೆಕ್ಟರ್‌ 32 ರ ಹರೆಯದ ಶಂಕರ್‌ ಎನ್ನುವವರಾಗಿದ್ದಾರೆ. ಮಾಗಡಿ ಯ ಬೈಚಾಪುರ ನಿವಾಸಿ ಯಾಗಿದ್ದ ಶಂಕರ್‌ ಬಿಡದಿ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ನಾಲ್ವರು ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲೆಂದು ತೆರಳಿದ್ದರು ಎಂದು ತಿಳಿದು ಬಂದಿದೆ.

ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜೊತೆಯಲ್ಲಿದ್ದ ಮೂವರು ಸ್ನೇಹಿತರನ್ನು ವಶಕ್ಕೆಪಡೆದು ವಿಚಾರಣೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next