Advertisement

ರಮೇಶ ಯಾವಾಗ ಯೂಟರ್ನ್ ಹೊಡಿತಾರೆ ಗೊತ್ತಿಲ್ಲ: ಸತೀಶ್‌

10:56 PM Aug 31, 2019 | Team Udayavani |

ಬೆಳಗಾವಿ: ಅನರ್ಹ ಶಾಸಕ ರಮೇಶ ಜಾರಕಿಹೊಳಿ ಯಾವಾಗ ಮತ್ತೆ ಯೂಟರ್ನ್ ಹೊಡೆಯುತ್ತಾರೆಂದು ಹೇಳ್ಳೋಕೆ ಸಾಧ್ಯವಿಲ್ಲ. ಅವರಿಗೆ ಮೊದಲಿನಿಂದಲೂ ಜನರ ಬಗ್ಗೆ ಕಾಳಜಿ ಕಡಿಮೆ ಎನ್ನುವ ಮೂಲಕ ಶಾಸಕ ಸತೀಶ ಜಾರಕಿಹೊಳಿ ಹೊಸ ವಿವಾದ ಹುಟ್ಟುಹಾಕಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರತಿ ಬಾರಿ ರಮೇಶ ಚುನಾವಣೆ ರಾಜಕೀಯ ಮಾಡುತ್ತಾರೆ. ನಾಳೆ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಗುಂಪುಗಾರಿಕೆ ಮಾಡಿದರೂ ಅಚ್ಚರಿಯಿಲ್ಲ.

Advertisement

ಆದರೆ, ಜನರು ಸಂಕಷ್ಟದಲ್ಲಿ ಇದ್ದಾಗ ಅವರನ್ನು ಬಿಟ್ಟು ದೆಹಲಿಯಲ್ಲಿ ಕುಳಿತಿರು ವುದು ಸರಿಯಲ್ಲ ಎಂದು ಟಾಂಗ್‌ ನೀಡಿದರು. ಬಾಲಚಂದ್ರ ಜಾರಕಿಹೊಳಿಗೆ ಕೆಎಂಎಫ್‌ ಅಧ್ಯಕ್ಷ ಸ್ಥಾನ ಸಿಕ್ಕಿದ್ದು ಸಂತೋಷದ ವಿಚಾರವೇನಲ್ಲ. ಇದು ಮೊದಲೇ ಕಾಂಗ್ರೆಸ್‌ನ ಭೀಮಾ ನಾಯಕಗೆ ಸಿಗಬೇಕಿತ್ತು. ಆದರೆ, ಈಗ ಬಿಜೆಪಿ ಪಕ್ಷದ ಆಧಾರದ ಮೇಲೆ ಬಾಲಚಂದ್ರ ಜಾರಕಿ ಹೊಳಿ ಆಯ್ಕೆಯಾಗಿದ್ದಾರೆ ಎಂದ ಅವರು, ಕೆಎಂಫ್‌ನಲ್ಲಿ ಒಳ್ಳೆಯ ಕೆಲಸ ಮಾಡಲಿ ಎಂಬು ದಷ್ಟೇ ನಮ್ಮ ಆಶಯ ಎಂದರು.

ಗೊಂದಲದಲ್ಲಿ ಬಿಜೆಪಿ ಸರ್ಕಾರ: ಬಿಜೆಪಿ ಸರ್ಕಾರ ಸಾಕಷ್ಟು ಗೊಂದಲದಲ್ಲಿದೆ. ಇದು ಎಷ್ಟು ದಿನ ನಡೆಯಲಿದೆ ಎಂಬುದನ್ನು ಕಾದು ನೋಡಬೇಕು. ಮುಂದೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನೂ ನೋಡಬೇಕು. ಸದ್ಯ ಬಿಜೆಪಿ ಸರ್ಕಾರ ತೊಂದರೆಯಲ್ಲಿದೆ. ಈ ಸರ ಕಾರ ಒಂದು ತಿಂಗಳು ಮಾತ್ರ ಎಂದು ಬಿಜೆಪಿಯವರೇ ಹೇಳುತ್ತಿದ್ದಾರೆ.

ಮುಂದೆ ಏನಿದ್ದರೂ ಮಧ್ಯಂತರ ಚುನಾವಣೆಯೇ ಇದಕ್ಕೆ ಪರಿಹಾರ ಎಂದರು. ಶಾಸಕ ಉಮೇಶ ಕತ್ತಿಗೆ ಸಚಿವ ಸ್ಥಾನ ಕೈತಪ್ಪಿದ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕತ್ತಿ ಅವರನ್ನು ಸಾಕಷ್ಟು ಬಾರಿ ಭೇಟಿಯಾಗಿದ್ದೇನೆ. ಆಗಾಗ ಭೆಟ್ಟಿಯಾಗುತ್ತಲೇ ಇರುತ್ತೇನೆ. ಅದರಲ್ಲಿ ಹೊಸದೇನಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next