Advertisement

ಸಿಡಿ ಪ್ರಕರಣ : ಡಿಕೆ ಶಿವಕುಮಾರ್ ರಾಜೀನಾಮೆ ಕೊಡುವುದು ಬೇಡ : ರಮೇಶ್ ಜಾರಕಿಹೊಳಿ

09:13 PM Mar 26, 2021 | Girisha |

ಬೆಂಗಳೂರು : ಸಿಡಿ ಪ್ರಕರಣದ ಆಡಿಯೋದಲ್ಲಿ ಡಿಕೆ ಶಿವಕುಮಾರ್ ಹೆಸರನ್ನ ಪ್ರಸ್ತಾಪ ಮಾಡಿದ್ದನ್ನ ಮಾಧ್ಯಮಗಳಲ್ಲಿ ನೋಡಿದ್ದೇನೆ. ನನ್ನಂತೆ ಅವರಿಗೆ ಅನ್ಯಾಯ ಆಗೋದು ಬೇಡ. ಅವರು ಬಹಳ ಕಷ್ಟಪಟ್ಟು ಬಂದಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

Advertisement

ನನ್ನಂತೆ ಅವರು ರಾಜೀನಾಮೆ ಕೊಡುವುದು ಬೇಡ. ಅವರು ಚೆನ್ನಾಗಿರಲಿ. ನಂಗೆ ಅವರು ಹಳೇ ಸ್ನೇಹಿತ. ಅವರು ರಾಜ್ಯ ಸುತ್ತಬೇಕು. ಅವ್ರು ಕಷ್ಟದಲ್ಲಿ ಜೊತೆಗಿದ್ರು ರಾಜಿನಾಮೆ ಕೊಡೋದು ಬೇಡ ಎಂದಿದ್ದಾರೆ.

ಎಫ್ ಐ ಆರ್ ದಾಖಲಾದ ವಿಚಾರವಾಗಿ ಮಾತನಾಡಿರುವ ರಮೇಶ್ ಜಾರಕಿಹೊಳಿ, ನನ್ನ ಮೇಲೆ ಎಫ್ ಐಆರ್ ದಾಖಲಾಗಿದೆ ಆಗಲೀ. ನಾನು ಜಾಮೀನು ತೆಗೆದುಕೊಳ್ಳುವುದಿಲ್ಲ. ನಾನು ಕೊಟ್ಟ ದೂರಿನ ಮೇಲೆ ಮೊದಲು ತನಿಖೆ ಆಗಲಿ. ನನ್ನ ತಪ್ಪಿದರೆ ನನಗೆ ಶಿಕ್ಷೆಯಾಗಲಿ  ಎಂದು ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next