Advertisement

Dharmasthala; ಸಿರಿ ಸಂಸ್ಥೆ ಪ್ರಧಾನ ಕಚೇರಿಗೆ ರಮೇಶ್‌ ಅರವಿಂದ್‌ ಭೇಟಿ

12:39 AM Jan 28, 2024 | Team Udayavani |

ಬೆಳ್ತಂಗಡಿ: ಚಿತ್ರ ನಟ ಹಾಗೂ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಉತ್ಪನ್ನಗಳ ರಾಯಭಾರಿ ಆಗಿರುವ ರಮೇಶ್‌ ಅರವಿಂದ್‌ ಸಿರಿ ಸಂಸ್ಥೆಯ ಪ್ರಧಾನ ಕಚೇರಿ ಉಜಿರೆಗೆ ಶುಕ್ರವಾರ ಭೇಟಿ ನೀಡಿದರು.

Advertisement

ಬಳಿಕ ಸಭೆಯಲ್ಲಿ ಮಾತನಾಡಿ, ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಡಾ| ಹೇಮಾವತಿ ಅಮ್ಮನವರ ಮಾರ್ಗದರ್ಶನ ಹಾಗೂ ಸಿರಿ ಎಂಡಿ ಕೆ.ಎನ್‌. ಜನಾದ‌ìನ ಅವರ ಮುಂದಾ ಳತ್ವದಲ್ಲಿ ನಡೆಯುತ್ತಿರುವ ಸಿರಿ ಸಂಸ್ಥೆಯ ಉತ್ಪನ್ನಗಳಿಗೆ ರಾಯಭಾರಿಯಾಗಿರಲು ನನಗೆ ಬಹಳ ಹೆಮ್ಮೆಯೆನಿಸುತ್ತಿದೆ ಎಂದು ಅವರು ಹೇಳಿದರು.

ಇಲ್ಲಿನ ಪ್ರತೀ ಉತ್ಪನ್ನದಲ್ಲಿಯೂ ಬಡ ಹೆಣ್ಣುಮಕ್ಕಳ ಪರಿಶ್ರಮ ಅಡಗಿದೆ. ನಾವೆಲ್ಲರೂ ಸಿರಿ ಉತ್ಪನ್ನಗಳನ್ನು ಬಳಸಿದರೆ ಇಲ್ಲಿರುವ ಪ್ರತೀ ಹೆಣ್ಣುಮಕ್ಕಳ ಬಾಳಿನಲ್ಲೂ ಸದಾ ನಗು, ನೆಮ್ಮದಿ ಕೂಡಿ ರಲು ಸಹಕಾರಿಯಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್‌. ಜನಾರ್ದನ ಅವರು ಸಿರಿ ಸಿಬಂದಿಯ ಪರವಾಗಿ ರಮೇಶ್‌ ಅವರನ್ನು ಗೌರವಿಸಿದರು.

ಸಿರಿ ಆಡಳಿತ ಮಂಡಳಿ ನಿರ್ದೇಶಕರಾದ ರಾಜೇಶ್‌ ಪೈ, ಆಡಳಿತ ಮತ್ತು ಲೆಕ್ಕಪತ್ರ ವಿಭಾಗದ ನಿರ್ದೇಶಕ ಪ್ರಸನ್ನ ಯು. ಮೊದಲಾದವರಿದ್ದರು. ಸಿರಿ ಗೋದಾಮು ಪ್ರಬಂಧಕರಾದ ಜೀವನ್‌ ಕುಮಾರ್‌ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ರಮೇಶ್‌ ಅವರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಬಳಿಕ ಡಾ| ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಸಿರಿ ಸಂಸ್ಥೆಯ ಅಭಿವೃದ್ಧಿ ಕುರಿತು ಚರ್ಚಿಸಿದರು. ರಮೇಶ್‌ ಅವರ ರಾಯಭಾರತ್ವದಲ್ಲಿ ಸಿರಿ ಸಂಸ್ಥೆಯು ಸಮಗ್ರ ಏಳಿಗೆ ಕಾಣುತ್ತಿರುವುದಕ್ಕೆ ಡಾ| ಹೆಗ್ಗಡೆ ಪ್ರಶಂಸೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next