Advertisement

ಅಯ್ಯೋ! ದಿಕ್ಕಾಪಾಲಾಗಿ ಓಡಿ ಹೋದ ಸಚಿವ ರಮಾನಾಥ ರೈ, ಸಂಸದ ಅಂಗಡಿ

04:35 PM Nov 24, 2017 | Sharanya Alva |

ಬೆಳಗಾವಿ: ಅರಣ್ಯ ಸಚಿವ ರಮಾನಾಥ ರೈ, ಅಧಿಕಾರಿಗಳು, ಜನರು ಏಕಾಏಕಿ ದಿಕ್ಕಾಪಾಲಾಗಿ ಓಡಿದ ಘಟನೆ ಬೆಳಗಾವಿಯ ಮಚ್ಚೆ ಗ್ರಾಮದ ಸಮೀಪ ಶುಕ್ರವಾರ ನಡೆದಿದೆ.

Advertisement

ಘಟನೆಗೆ ಕಾರಣವೇನು?
ಬೆಳಗಾವಿ ಮಚ್ಚೆ ಗ್ರಾಮದ ಸಮೀಪ ಅರಣ್ಯ ಇಲಾಖೆ ನಿರ್ಮಿಸಿದ್ದ ಜೀವ ವೈವಿಧ್ಯ ಉದ್ಯಾನವನ(ಬಯೋ ಪಾರ್ಕ್) ಉದ್ಘಾಟನೆಗಾಗಿ ಅರಣ್ಯ ಸಚಿವರಾದ ರಮಾನಾಥ ರೈ ಅವರು ಆಗಮಿಸಿದ್ದರು, ವೇದಿಕೆಯಲ್ಲಿ ಸಂಸದ ಸುರೇಶ್ ಅಂಗಡಿ ಕೂಡಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಡ್ರೋನ್ ಕ್ಯಾಮರಾವನ್ನು ಹಾರಿ ಬಿಡಲಾಯಿತು. ಆಗ ಡ್ರೋನ್ ಶಬ್ದಕ್ಕೆ ಮರದಲ್ಲಿದ್ದ ಜೇನ್ನೋಣಗಳು ಗುಂಪು, ಗುಂಪಾಗಿ ದಾಳಿ ನಡೆಸಲು ಆರಂಭಿಸಿದ್ದವು!

ಏಕಾಏಕಿ ಜೇನ್ನೊಣಗಳು ಕಚ್ಚಲು ಶುರು ಮಾಡಿದಾಗ ಸಚಿವ ರಮಾನಾಥ ರೈ, ಸಂಸದರು, ಅಧಿಕಾರಿಗಳು, ಜನರು ದಿಕ್ಕಾಪಾಲಾಗಿ ಓಡಿ ಹೋದ ಪ್ರಸಂಗ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next