Advertisement

ಬಿಜೆಪಿ ನಾಯಕರಿಂದ ರಾಮಲಿಂಗಾರೆಡ್ಡಿ ಭೇಟಿ

04:36 AM Jul 14, 2019 | Team Udayavani |

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಸಚಿವ ರಾಮಲಿಂಗಾರೆಡ್ಡಿ ನಿವಾಸಕ್ಕೆ ಬಿಜೆಪಿ ನಾಯಕರು ಶನಿವಾರ ಭೇಟಿ ನೀಡಿ ಚರ್ಚಿಸಿರುವುದು ಕುತೂಹಲ ಮೂಡಿಸಿದೆ. ರಾಮಲಿಂಗಾರೆಡ್ಡಿ ಅವರು ಮನಸ್ಸು ಬದಲಿಸಿ ರಾಜೀನಾಮೆ ವಾಪಸ್‌ ಪಡೆಯಲಿದ್ದಾರೆ ಎಂಬ ಮಾತುಗಳ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದೆ.

Advertisement

ಶಾಸಕರಾದ ಎಸ್‌.ಆರ್‌.ವಿಶ್ವನಾಥ್‌, ಎಂ.ಕೃಷ್ಣಪ್ಪ, ಪಾಲಿಕೆ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಅವರು ಭೇಟಿ ನೀಡಿ, ತಮ್ಮ ನಿರ್ಧಾರ ಬದಲಿಸದಂತೆ ಅವರ ಮನವೊಲಿಸಿದರು ಎಂದು ಹೇಳಲಾಗಿದೆ. ಸಭೆಯ ನಂತರ ಮಾತನಾಡಿದ ಎಸ್‌.ಆರ್‌.ವಿಶ್ವನಾಥ್‌, ನಾವು ರಾಜಕೀಯ ವಿಚಾರ ಚರ್ಚಿಸಲು ಬರಲಿಲ್ಲ. ರೆಡ್ಡಿ ಸಂಘದ ಚುನಾವಣೆ ವಿಷಯದಲ್ಲಿ ಮಾತನಾಡಲು ಬಂದಿದ್ದೆವು ಅಷ್ಟೇ ಎಂದು ತಿಳಿಸಿದರು.

ನಾನು ರಾಜೀನಾಮೆ ನೀಡಲ್ಲ: ಈ ಮಧ್ಯೆ, ಸುದ್ದಿಗಾರರ ಜತೆ ಮಾತನಾಡಿದ ಜಯನಗರ ಶಾಸಕಿ ಸೌಮ್ಯರೆಡ್ಡಿ, “ನಾನು ರಾಜೀನಾಮೆ ನೀಡುವುದಿಲ್ಲ. ರಾಜೀನಾಮೆ ನೀಡುತ್ತೇನೆಂದು ಹೇಳಿಯೂ ಇಲ್ಲ. ಶಾಸಕಾಂಗ ಪಕ್ಷದ ಸಭೆಗೂ ಹಾಜರಾಗಿದ್ದೆ, ಅಧಿವೇಶನಕ್ಕೂ ಹಾಜರಾಗಿದ್ದೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next