Advertisement

ಪಕ್ಷೇತರ ಸದಸ್ಯರ ಒಲಿಸಿಕೊಳ್ಳಲು ರಾಮಲಿಂಗಾರೆಡ್ಡಿ ಮಾತುಕತೆ

12:28 PM Sep 12, 2018 | |

ಬೆಂಗಳೂರು: ಬಿಬಿಎಂಪಿಯಲ್ಲಿ ಮೇಯರ್‌ -ಉಪ ಮೇಯರ್‌ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಪಕ್ಷೇತರ ಸದಸ್ಯರನ್ನು ಬಿಜೆಪಿಯತ್ತ ಸೆಳೆಯಲು ಮಾಜಿ ಉಪ ಮುಖ್ಯಮಂತ್ರಿ ಆರ್‌.ಆಶೋಕ್‌ ಮಾತುಕತೆ ನಡೆಸಿದ ಬೆನ್ನಲ್ಲೇ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ಪಕ್ಷೇತರ ಪಾಲಿಕೆ ಸದಸ್ಯರ ಜತೆ  ಖಾಸಗಿ ಹೊಟೇಲ್‌ನಲ್ಲಿ ಸಭೆ ನಡೆಸಿದರು. 

Advertisement

ಜಯನಗರ ವಾರ್ಡ್‌ನ ಗಂಗಾಬಿಕೆಯನ್ನು ಮೇಯರ್‌ ಮಾಡಲು ರಾಮಲಿಂಗಾ ರೆಡ್ಡಿ ಪ್ರಯತ್ನ ನಡೆಸಿದ್ದು, ಈ ಬಾರಿಯೂ ತಮ್ಮ ಪಕ್ಷದ ಅಭ್ಯರ್ಥಿ ಪರವಾಗಿರುವಂತೆ ಪಕ್ಷೇತರ ಸದಸ್ಯರಿಗೆ ಮನವಿ ಮಾಡಿದರು.

 ಕಳೆದ ಮೂರು ಅವಧಿಗೆ ಕಾಂಗ್ರೆಸ್‌ ಮೇಯರ್‌ ಆಯ್ಕೆಯಾಗಲು ಪಕ್ಷೇತರ ಸದಸ್ಯರು ಸಹಕಾರ ನೀಡಿದ್ದು, ಕಾಂಗ್ರೆಸ್‌ ಕೂಡ ಪಕ್ಷೇತರರ ಹಿತ ಕಾಯಲು ಬದ್ಧವಾಗಿದೆ. ಇದುವರೆಗೂ ಪಕ್ಷ ನಿಮ್ಮೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದೆ. ಈ ಬಾರಿಯೂ ಅದೇ ಮುಂದುವರೆಸಿಕೊಂಡು ಹೋಗಲು ಕಾಂಗ್ರೆಸ್‌ ಮೇಯರ್‌ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಕೋರಿದರು.

 ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರೂ ಸಹ ಪಕ್ಷೇತರ ಸದಸ್ಯರಿಗೆ ಕಾಂಗ್ರೆಸ್‌ ಪರವಾಗಿರುವಂತೆ ಮನವಿ ಮಾಡಿದರು ಎಂದು ಹೇಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next