Advertisement

ರಾಮಾ ರಾಮಾ ರೇ ಸತ್ಯಪ್ರಕಾಶ್‌ ಮತ್ತೆ ಬಂದ್ರು

05:46 PM Nov 19, 2017 | |

“ರಾಮಾ ರಾಮಾ ರೇ’ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ಡಿ.ಸತ್ಯ ಪ್ರಕಾಶ್‌ ಹೊಸ ಸಿನಿಮಾಕ್ಕಾಗಿ ಕಥೆಯಲ್ಲಿ ನಿರತರಾಗಿದ್ದರು. ಈಗ ಕಥೆ ಅಂತಿಮವಾಗಿದ್ದು, ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಹೌದು, ಸತ್ಯಪ್ರಕಾಶ್‌ ನಿರ್ದೇಶನದ ಹೊಸ ಚಿತ್ರವನ್ನು ಉಮಾಪತಿಯವರು ನಿರ್ಮಿಸುತ್ತಿದ್ದಾರೆ. ಈ ಹಿಂದೆ “ಹೆಬ್ಬುಲಿ’ ಚಿತ್ರದ ನಿರ್ಮಾಪಕರಲ್ಲೊಬ್ಬರಾಗಿದ್ದ ಉಮಾಪತಿಯವರು ಈಗ ಹೊಸ ತಂಡದೊಂದಿಗೆ ಹೊಸ ಬಗೆಯ ಚಿತ್ರ ಮಾಡಲು ಮುಂದಾಗಿದ್ದಾರೆ.

Advertisement

ಉಮಾಪತಿ ಹಾಗೂ ಸತ್ಯಪ್ರಕಾಶ್‌ ಜೊತೆಯಾಗಿ ಸಿನಿಮಾ ಮಾಡುತ್ತಾರೆಂಬ ಸುದ್ದಿ ತುಂಬಾ ದಿನಗಳಿಂದ ಓಡಾಡುತ್ತಿತ್ತು. ಆದರೆ, ಈಗ ಅಂತಿಮವಾಗಿದೆ. ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಅಂದಹಾಗೆ, ಇದು ಕಮರ್ಷಿಯಲ್‌ ಸಿನಿಮಾವಲ್ಲ. ಹೊಸ ಬಗೆಯ ಕಥೆಯೊಂದಿಗೆ ಈ ಬಾರಿಯೂ ಸತ್ಯಪ್ರಕಾಶ್‌ ಸಿನಿಮಾ ಮಾಡುತ್ತಿದ್ದಾರೆ. ಇಲ್ಲಿ ನಾಯಕ-ನಾಯಕಿ, ವಿಲನ್‌ ಯಾರೂ ಇರೋದಿಲ್ಲ. ಚಿತ್ರತಂಡ ಹೇಳುವಂತೆ ಕಥೆಯೇ ಈ ಚಿತ್ರದ ನಾಯಕ.

ಚಿತ್ರದ ಮುಖ್ಯಪಾತ್ರಧಾರಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ. ಚಿತ್ರದ ಮುಖ್ಯಪಾತ್ರಧಾರಿ 8 ರಿಂದ 10 ವರ್ಷದ ಹುಡುಗನಾಗಿರಬೇಕಾಗಿದ್ದು, ಚಿತ್ರತಂಡ ಆಡಿಷನ್‌ ಮೂಲಕ ಕಲಾವಿದರನ್ನು ಆಯ್ಕೆ ಮಾಡಲು ಮುಂದಾಗಿದೆ. ಕರ್ನಾಟಕದ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಆ ಮೂಲಕ ಚಿತ್ರದ ಮುಖ್ಯಪಾತ್ರಧಾರಿಯನ್ನು ಆಯ್ಕೆ ಮಾಡುವ ಆಲೋಚನೆ ಕೂಡಾ ಚಿತ್ರತಂಡಕ್ಕಿದೆ.

ಸ್ಪಷ್ಟವಾಗಿ ಕನ್ನಡ ಮಾತನಾಡುವ ಹಾಗೂ ನಿರ್ದೇಶಕರ ಕಲ್ಪನೆಯನ್ನು ಅರ್ಥಮಾಡಿಕೊಂಡು ನಟಿಸುವ ಸಾಮರ್ಥ್ಯವಿರುವ ಹುಡುಗರು ಯಾವುದೇ ಶಾಲೆಯಲ್ಲಿದ್ದರೂ ಆ ಶಾಲೆಯವರು ಚಿತ್ರತಂಡವನ್ನು ಸಂಪರ್ಕ ಮಾಡಬಹುದಂತೆ. ಇನ್ನು, ಚಿತ್ರಕ್ಕೆ ಟೈಟಲ್‌ ಅಂತಿಮವಾಗಿಲ್ಲ. ಉಳಿದಂತೆ ಚಿತ್ರಕ್ಕೆ ವಾಸುಕಿ ವೈಭವ್‌ ಸಂಗೀತ, ಲವಿತ್‌ ಛಾಯಾಗ್ರಹಣ, ವರದರಾಜ ಕಾಮತ್‌ ಕಲಾನಿರ್ದೇಶನ, ಕೆಂಪರಾಜು ಸಂಕಲನ ಚಿತ್ರಕ್ಕಿದೆ. ಚಿತ್ರೀಕರಣ ಮಲೆನಾಡಿನ ವಿವಿಧ ಕಡೆಗಳಲ್ಲಿ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next