Advertisement

ರಾಜ್ಯೋತ್ಸವ: ಧ್ವಜಾರೋಹಣಕ್ಕೆ ಸಚಿವರ ನಿಯೋಜನೆ

11:13 PM Oct 23, 2019 | Team Udayavani |

ಬೆಂಗಳೂರು: ನವೆಂಬರ್‌ 1ರಂದು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ನೆರವೇರಿಸಲು ಸಚಿವರು ಹಾಗೂ ಜಿಲ್ಲಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲದ 12 ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡಲಿದ್ದಾರೆ.

Advertisement

ಬೆಂಗಳೂರು ನಗರ-ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಾಗ ಲಕೋಟೆ-ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಮನಗರ- ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಬಳ್ಳಾರಿ- ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಿವಮೊಗ್ಗ-ಕೆ.ಎಸ್‌. ಈಶ್ವರಪ್ಪ, ಬೆಂಗಳೂರು ಗ್ರಾಮಾಂತರ- ಆರ್‌.ಅಶೋಕ್‌, ಬೆಳಗಾವಿ- ಜಗದೀಶ್‌ ಶೆಟ್ಟರ್‌, ರಾಯಚೂರು- ಶ್ರೀರಾಮುಲು, ಚಾಮರಾಜನಗರ- ಎಸ್‌.ಸುರೇಶ್‌ಕುಮಾರ್‌, ಮೈಸೂರು-ವಿ.ಸೋಮಣ್ಣ, ಚಿಕ್ಕಮಗಳೂರು- ಸಿ.ಟಿ.ರವಿ, ಉಡುಪಿ- ಬಸವ ರಾಜ ಬೊಮ್ಮಾಯಿ,

ಮಂಗಳೂರು- ಕೋಟ ಶ್ರೀನಿವಾಸ ಪೂಜಾರಿ, ತುಮಕೂರು- ಜೆ.ಸಿ.ಮಾಧುಸ್ವಾಮಿ, ಗದಗ- ಸಿ.ಸಿ.ಪಾಟೀಲ್‌, ಕೋಲಾರ- ಎಚ್‌.ನಾಗೇಶ್‌, ಬೀದರ್‌-ಪ್ರಭು ಚೌಹಾಣ್‌, ಉತ್ತರ ಕನ್ನಡ- ಶಶಿಕಲಾ ಜೊಲ್ಲೆ ಅವರನ್ನು ನಿಯೋಜಿಸಲಾಗಿದೆ. ಉಳಿದಂತೆ, ಕಲಬುರಗಿ, ಚಿಕ್ಕಬಳ್ಳಾಪುರ, ಕೊಪ್ಪಳ, ದಾವಣಗೆರೆ, ಮಂಡ್ಯ, ಹುಬ್ಬಳ್ಳಿ-ಧಾರವಾಡ, ಚಿತ್ರದುರ್ಗ, ಕೊಡಗು, ಹಾವೇರಿ, ಹಾಸನ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಗಳನ್ನು ಧ್ವಜಾರೋಹಣ ಮಾಡಲು ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next