Advertisement

ರಾಜ್ಯಸಭೆ ಚುನಾವಣೆ: ಜೆಡಿಎಸ್‌ ಶಸ್ತ್ರತ್ಯಾಗ; ಕುಪೇಂದ್ರ ರೆಡ್ಡಿ ಏಕಾಂಗಿ?

09:37 PM Jun 05, 2022 | Team Udayavani |

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಮೂರು ಪಕ್ಷಗಳ ತಂತ್ರ-ಪ್ರತಿತಂತ್ರಗಳ ಮುಂದುರಿದಿದೆ. ಆದರೆ, ಜೆಡಿಎಸ್‌ “ಶಸ್ತ್ರತ್ಯಾಗ’ ಮಾಡಿದಂತೆ ಕಂಡು ಬರುತ್ತಿದೆ.

Advertisement

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮರಸ್ವಾಮಿ “ತಟಸ್ಥ’ರಾದಂತೆ ಕಂಡು ಬರುತ್ತಿದ್ದು, ಅಭ್ಯರ್ಥಿ ಕುಪೇಂದ್ರ ರೆಡ್ಡಿ “ಏಕಾಂಗಿ’ಯಾದಂತೆ ಕಾಣುತ್ತಿದೆ.

ಆರಂಭದಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರೊಂದಿಗೆ ಮಾತನಾಡಿದರು. ಸೋನಿಯಾ ಗಾಂಧಿ ಜೊತೆ ಸಂಧಾನಕ್ಕೆ ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ಹೋಗಿದ್ದರು. ಇದಲ್ಲದೇ ಪ್ರಧಾನಿ ಮೋದಿಯವರೊಂದಿಗೂ ದೇವೇಗೌಡರು ಮಾತನಾಡಿದರು ಎಂದೆಲ್ಲಾ ಹೇಳಲಾಯಿತು.

ಕಾಂಗ್ರೆಸ್‌ ಎರಡನೇ ಅಭ್ಯರ್ಥಿ, ಬಿಜೆಪಿ ಮೂರನೇ ಅಭ್ಯರ್ಥಿ ಹಾಕಿದ ಮೇಲೆ ಜೆಡಿಎಸ್‌ ಲೆಕ್ಕಾಚಾರ ಉಲ್ಟಾ ಆಯಿತು. ಕಾಂಗ್ರೆಸ್‌ 2ನೇ ಅಭ್ಯರ್ಥಿಯನ್ನು ವಾಪಸ್‌ ಪಡೆಯಲಿದೆ ಎಂಬ ವಿಶ್ವಾಸವೂ ಹುಸಿಯಾಯಿತು.

ಕಳೆದರೆಡು ದಿನಗಳಿಂದ ದೇವೇಗೌಡರು ಮೌನವಾಗಿದ್ದಾರೆ. ವಿದೇಶ ಪ್ರವಾಸದಿಂದ ವಾಪಸ್‌ ಆಗಿರುವ ಕುಮಾರಸ್ವಾಮಿ, ಹುಬ್ಬಳ್ಳಿ, ಬೆಳಗಾವಿ, ಬಾಗಲಕೋಟೆ ಪ್ರವಾಸದಲ್ಲಿದ್ದರು. ರಾಜ್ಯಸಭಾ ಚುನಾವಣೆ ಬಗ್ಗೆ ಅವರು ಹೆಚ್ಚು ಮಾತನಾಡಲೂ ಇಲ್ಲ. ಇದು ಜೆಡಿಎಸ್‌ ಅಭ್ಯರ್ಥಿಯಲ್ಲಿ ನಿರಾಸೆ ಮೂಡಿಸಿದಂತಿದೆ. ಜಾತ್ಯಾತೀತ ತತ್ವದ ಆಧಾರದಲ್ಲಿ ಆತ್ಮಸಾಕ್ಷಿ ಮತವನ್ನು ಕೇಳುತ್ತೇವೆ ಎಂದು ಜೆಡಿಎಸ್‌ ಮುಖಂಡರು ಹೇಳುತ್ತಿದ್ದಾರೆ.

Advertisement

ಆದರೆ, ಆತ್ಮಸಾಕ್ಷಿ ಮತಗಳು ತಮಗೆ ಬೀಳುವ ಬಗ್ಗೆ ಸ್ವತಃ ಅಭ್ಯರ್ಥಿಯೇ ಆತ್ಮವಿಶ್ವಾಸ ಹೊಂದಿದಂತಿಲ್ಲ. ಈ ಹಂತದಲ್ಲಿ ಪ್ರಯತ್ನವಷ್ಟೇ ಮಾಡಬಹುದು. ಆದರೆ ಫ‌ಲ ಸಿಗುತ್ತೆ ಎಂದು ಹೇಳಲಿಕ್ಕಾಗುವುದಿಲ್ಲ. ಏನೇ ತಂತ್ರಗಳಿದ್ದರೂ ಮೊದಲೇ ಮಾಡಿಕೊಳ್ಳಬೇಕಾಗುತ್ತದೆ ಎಂದು ಸ್ವತಃ ಅಭ್ಯರ್ಥಿಯೇ ಹೇಳುತ್ತಾರೆ.

ಭರವಸೆ ಹೇಗೆ ಇಟ್ಟುಕೊಳ್ಳುವುದು, ಎಲ್ಲರೂ ಪ್ರತಿಷ್ಠೆಗೆ ಬಿದ್ದಿದ್ದಾರೆ. ಬಿಜೆಪಿ-ಕಾಂಗ್ರೆಸ್‌ ಇಬ್ಬರೂ ಜೆಡಿಎಸ್‌ಗೆ ಓಟ್‌ ಹಾಕಲ್ಲ. ಜೆಡಿಎಸ್‌ ಆ ಎರಡೂ ಪಕ್ಷಗಳಿಗೆ ಓಟ್‌ ಹಾಕಲ್ಲ. ಇದರಿಂದ ಯಾರಿಗೆ ಲಾಭ ಆಗಲಿದೆ ಎಂದು ಬಿಡಿಸಿ ಹೇಳಬೇಕಾಗಿಲ್ಲ. ಎರಡನೇ ಪ್ರಾಶಸ್ತ್ಯದ ಮತ, ಆತ್ಮ ಸಾಕ್ಷಿ ಮತ, ಅಡ್ಡ ಮತದಾನ ಇವು ಲೆಕ್ಕಾಚಾರಗಳಷ್ಟೇ ಎಂದು ಕೆಲ ಜೆಡಿಎಸ್‌ ಮುಖಂಡರು ಹೇಳುತ್ತಾರೆ.

“ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಕಾಂಗ್ರೆಸ್‌-ಬಿಜೆಪಿಯಲ್ಲಿ ಅನೇಕರು ನಮಗೆ ಸಮಾನ ಮನಸ್ಕರು ಇದ್ದಾರೆ. ದೇವೇಗೌಡರು, ಕುಮಾರಸ್ವಾಮಿಯವರು ಏನು ಮಾಡಬೇಕು, ಏನು ಹೇಳಬೇಕು ಎಲ್ಲಾ ಮಾಡಿದ್ದಾರೆ. ಈಗ ಎಚ್‌.ಡಿ. ರೇವಣ್ಣ, ಸಿ.ಎಸ್‌. ಪುಟ್ಟರಾಜು ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ’.
– ಟಿ.ಎ ಶರವಣ, ವಿಧಾನಪರಿಷತ್‌ ಸದಸ್ಯ.

Advertisement

Udayavani is now on Telegram. Click here to join our channel and stay updated with the latest news.

Next