Advertisement
ಕಾಂಗ್ರೆಸ್- ಬಿಜೆಪಿ ಬೆಂಬಲದ ನಿರೀಕ್ಷೆಯಿಂದ ಜೆಡಿಎಸ್ ಆರಂಭದಲ್ಲಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಸಿತ್ತು. ಆದರೆ ಜೆಡಿಎಸ್ ಲೆಕ್ಕಾಚಾರವನ್ನು ತಲೆಕೆಳಗು ಮಾಡಿ ಕಾಂಗ್ರೆಸ್ ತಾವೂ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಮನ್ಸೂರ್ ಅಲಿ ಖಾನ್ ಅವರು ಕಾಂಗ್ರೆಸ್ ಎರಡನೇ ಅಭ್ಯರ್ಥಿಯಾಗಿದ್ದಾರೆ.
Related Articles
Advertisement
ರಾಜ್ಯಸಭೆ ಚುನಾವಣೆಗೆ ಮತ ಹಾಕುವವರು ವಿಧಾನಸಭೆ ಶಾಸಕರ. ಇವರ ಸಂಖ್ಯಾಬಲದ ಆಧಾರದ ಮೇಲೆ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾರೆ.
ಚುನಾವಣೆ ಗೆಲ್ಲಲು ಪ್ರತಿ ಅಭ್ಯರ್ಥಿಗೆ 45 ಮತಗಳ ಅಗತ್ಯವಿದೆ.
ಬಿಜೆಪಿ ವಿಧಾನಸಭೆಯಲ್ಲಿ 121 ಸಂಖ್ಯಾಬಲ ಹೊಂದಿದ್ದು, ಮೊದಲೆರಡು ಅಭ್ಯರ್ಥಿಗಳಿಗೆ ಚಲಾವಣೆಯಾದ ಬಳಿಕ 32 ಮತಗಳು ಬಾಕಿ ಉಳಿಯುತ್ತದೆ.
ಕಾಂಗ್ರೆಸ್ ಬಳಿ 70 ಮತಗಳಿವೆ. ಜೈರಾಮ್ ರಮೇಶ್ ಗೆ ಚಲಾವಣೆಯಾದ ಬಳಿಕ ಎರಡನೇ ಅಭ್ಯರ್ಥಿಗೆ 25 ಮತಗಳಷ್ಟೇ ಉಳಿಕೆಯಾಗುತ್ತದೆ
ಜೆಡಿಎಸ್ ಬಳಿ ಇರುವುದು ಕೇವಲ 32 ಮತಗಳು. ಕುಪೇಂದ್ರ ರೆಡ್ಡಿ ಗೆಲುವಿಗೆ ಇನ್ನೂ 13 ಮತಗಳ ಅವಶ್ಯಕತೆಯಿದೆ. ಹೀಗಾಗಿ ಅವರಿಗೆ ಇತರರ ಸಹಾಯ ಅಗತ್ಯ.
ಚುನಾವಣೆಯಲ್ಲಿ ಒಂದು ವೇಳೆ ಅಡ್ಡಮತದಾನ ನಡೆಯದೇ, ಮೊದಲ ಪ್ರಾಶಸ್ತ್ಯದಲ್ಲಿ ಫಲಿತಾಂಶ ಬರದಿದ್ದರೆ, ಎರಡನೇ ಪ್ರಾಶಸ್ತ್ಯದ ಮತದಾನ ನಡೆಯಲಿದೆ. ಆಗ ಹೆಚ್ಚು ಮತ ಹೊಂದಿರುವ ಬಿಜೆಪಿ ಗೆಲುವು ಸಾಧ್ಯ ಎನ್ನುವುದು ಲೆಕ್ಕಾಚಾರ.