Advertisement

ರಾಜ್ಯಸಭೆ ಉಪಸಭಾಪತಿ ಸಮಿತಿಗೆ ಪಿ.ಟಿ. ಉಷಾ ನೇಮಕ

10:00 PM Dec 20, 2022 | Team Udayavani |

ನವದೆಹಲಿ: ರಾಜ್ಯಸಭೆಗೆ ನಾಮ ನಿರ್ದೇಶನಗೊಂಡ ಸದಸ್ಯೆ ಪಿ.ಟಿ.ಉಷಾ ಮತ್ತು ವೈಎಸ್‌ಆರ್‌ಸಿಪಿ ಸಂಸದ ವಿ.ವಿಜಯಸಾಯಿ ರೆಡ್ಡಿ ಅವರನ್ನು ಮೇಲ್ಮನೆಯ ಉಪ-ಸಭಾಪತಿಯ ಸಮಿತಿಗೆ ನೇಮಕ ಮಾಡಲಾಗಿದೆ.

Advertisement

ಇದೇ ಮೊದಲ ಬಾರಿಗೆ ನಾಮನಿರ್ದೇಶನಗೊಂಡ ಸದಸ್ಯರೊಬ್ಬರನ್ನು ಉಪಸಭಾಪತಿ ಅಧ್ಯಕ್ಷತೆಯ ಸಮಿತಿಗೆ ನೇಮಿಸಲಾಗಿದೆ.

ರಾಜ್ಯಸಭೆಯ ಉಪಸಭಾಪತಿಯವರ ನೇತೃತ್ವದಲ್ಲಿ ಈ ಸಮಿತಿ ಇರುತ್ತದೆ. ಅದರಲ್ಲಿ ಒಟ್ಟು 12 ಮಂದಿ ಸದಸ್ಯರು ಇರುತ್ತಾರೆ. ಸದ್ಯ ಉಪಸಭಾಪತಿಯಾಗಿರುವ ಹರಿವಂಶ ನಾರಾಯಣ ಸಿಂಗ್‌ ಅದರ ಅಧ್ಯಕ್ಷರು. ಅವರಿಗೆ ಸಮಿತಿಗೆ ಸದಸ್ಯರನ್ನು ನಾಮ ನಿರ್ದೇಶನಗೊಳಿಸಲು ಅಧಿಕಾರ ಇರುತ್ತದೆ. ಜತೆಗೆ ಅವರಿಗೆ ಆರು ಮಂದಿ ಉಪಾಧ್ಯಕ್ಷರನ್ನು ನೇಮಿಸಲೂ ಅಧಿಕಾರ ಇದೆ.

Advertisement

Udayavani is now on Telegram. Click here to join our channel and stay updated with the latest news.

Next