Advertisement

ಎಡದಂಡೆ ಕಾಲುವೆ ಕುಸಿತ; ಅಧಿಕಾರಿಗಳ ಪರಿಶೀಲನೆ ತುರ್ತು ದುರಸ್ತಿಗೆ ಕ್ರಮ :ಶಾಸಕ ರಾಜುಗೌಡ

07:53 PM Mar 08, 2022 | Team Udayavani |

ಹುಣಸಗಿ : ತಾಲೂಕಿನ ಅಗ್ನಿ ಗ್ರಾಮದ ಬಳಿ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ ಕುಸಿತ ಸ್ಥಳಕ್ಕೆ ಶಾಸಕ ರಾಜುಗೌಡ ಅವರ ಸಹೋದರ ಬಬ್ಲೂಗೌಡ ಭೇಟಿ ನೀಡಿ ವೀಕ್ಷಿಸಿದರು.

Advertisement

ಅಗ್ನಿ ಗ್ರಾಮದ ಬಳಿ ಎಡದಂಡೆ ಮುಖ್ಯ ಕಾಲುವೆ 80 ಮೀಟರ್ ನಷ್ಟು ಕುಸಿತಗೊಂಡಿದ್ದು, ರೈತರಲ್ಲಿ ಆತಂಕ ಮೂಡಿಸಿದೆ. ಸೋಮವಾರ ನೀರು ಸ್ಥಗಿತಗೊಳಿಸಿದ ನಂತರ ಕಾಲುವೆಯ ಎಸ್‌ಆರ್ ಬಳಿ ಮಂಗಳವಾರ ಮುಂಜಾನೆಯಿಂದ ಕಾಲುವೆ ಕುಸಿತ ವಾಗಿರುವುದು ಕಂಡು ಬಂದಿದೆ. ಕುಸಿತಗೊಂಡ ಸ್ಥಳಕ್ಕೆ ನಿಗಮದ ಮುಖ್ಯ ಎಂಜಿನೀಯರ ಅಶೋಕ ವಾಸನದ ಹಾಗೂ ಎಸ್.ಇ ಶಂಕರ್ ರಾಠೋಡ, ಕರ‍್ಯನಿರ್ವಾಹಕ ಎಂಜಿನೀಯರ ಶಂಕರ್ ನಾಯ್ಕೋಡಿ, ಎಇಇ ವಿ.ಎಲ್.ಕಂಬಾರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ನಂತರ ಇಇ ಶಂಕರ್ ನಾಯ್ಕೋಡಿ ಸುದ್ದಿಗಾರರೊಂದಿಗೆ ಮಾತನಾಡಿ, 2012 ರಲ್ಲಿ ಇಆರ್‌ಎಂ ನಲ್ಲಿ ಈ ಕಾಮಗಾರಿಯನ್ನು ನಿರ್ವಹಿಸಲಾಗಿತ್ತು. ಆ ಬಳಿಕ ಮೂರು ಬಾರಿ ಎಡದಂಡೆಯ ಮುಖ್ಯ ಕಾಲುವೆಯ 61 ನೇ ಕಿ.ಮಿ ಬಳಿ ಪ್ರತಿ ವರ್ಷವೂ ಕಾಲುವೆ ಕುಸಿತ ಆಗುತ್ತಿದೆ. ಈ ಕುರಿತು ತಜ್ಞರಿಗೆ ವರಿದಿ ಸಲ್ಲಿಸಲಾಗುತ್ತಿದ್ದು, ಅವರ ವರದಿಯ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇನ್ನು ಉಳಿದಿರುವ ಅವಧಿಗೆ ಕಾಲುವೆಗೆ ನೀರು ಹರಿಸುವಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು, ರೈತರು ಯಾವುದೇ ಕಾಣಕ್ಕೂ ಆತಂಕಗೊಳ್ಳಬಾರದು. ಸದ್ಯ ತಾತ್ಕಾಲಿಕವಾಗಿ ಮರಳು ತುಂಬಿದ ಚೀಲಗಳನ್ನು ಇಟ್ಟು ನೀರು ಒದಗಿಸಲಾಗುವುದು. ನಂತರ ನೀರು ಸ್ಥಗಿತಗೊಳಿಸಿದ ಬಳಿಕ ಕಾಲುವೆ ದುರಸ್ತಿ ಕಾರ್ಯ ನಡೆಸಲಾಗುವುದು ಎಂದು ತಿಳಿಸಿದರು.

Advertisement

ಮುಖ್ಯಕಾಲುವೆ ಪದೇ ಪದೇ ಕುಸಿಯುತ್ತಿದ್ದು, ರೈತರನ್ನು ಚಿಂತೆಗೀಡು ಮಾಡಿದೆ. ಸದ್ಯ ಭತ್ತ ತೆನೆ ಹಿರಿಯುವ ಹಂತಕ್ಕೆ ಬಂದಿವೆ. ರೈತರ ಹಿತದೃಷ್ಟಿಯಿಂದ ಆದಷ್ಟು ಬೇಗ ಮುಖ್ಯಮಂತ್ರಿ ಮತ್ತು ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿ ಕಾಲುವೆ ದುರಸ್ತಿಗೆ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ನರಸಿಂಹನಾಯಕ(ರಾಜುಗೌಡ) ತಿಳಿಸಿದ್ದಾರೆ.

ಒತ್ತಾಯ: ಅಗ್ನಿ ಗ್ರಾಮದ ಬಳಿ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ ಪದೆ ಪದೆ ಕುಸಿತ ಇದ್ದರೂ ಕೂಡಾ ಮೇ ಮತ್ತು ಜೂನ್ ತಿಂಗಳಲ್ಲಿ ಶಾಶ್ವತ ದುರಸ್ತಿ ಕೈಗೊಳ್ಳಲು ಸಾಕಷ್ಟು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಸಿಎಂ ಅವರು ಹಾಗೂ ಜಲ ಸಂಪನ್ಮೂಲ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೌರಾಷ್ಟ ಸೋಮನಾಥ ನೀರು ಬಳಕೆದಾರರ ಸಂಘಗಳ ಮಹಾ ಮಂಡಳದ ಅಧ್ಯಕ್ಷ ರಂಗಪ್ಪ ಡಂಗಿ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next