Advertisement

ಐಪಿಎಲ್‌ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ: ರಜನೀಕಾಂತ್‌ ಖಂಡನೆ

11:44 AM Apr 11, 2018 | Team Udayavani |

ಚೆನ್ನೈ : ಕಾವೇರಿ ನೀರಿಗಾಗಿ ಚೆನ್ನೈನಲ್ಲಿನ ಐಪಿಎಲ್‌ ಪಂದ್ಯಗಳ ವಿರುದ್ಧದ ಹಿಂಸಾತ್ಮಕ ಪ್ರತಿಭಟನೆಯನ್ನು ತಮಿಳು ಚಿತ್ರರಂಗದ ಸೂಪರ್‌ ಸ್ಟಾರ್‌ ಮತ್ತು ಭಾವೀ ರಾಜಕಾರಣಿ ರಜನೀಕಾಂತ್‌ ಖಂಡಿಸಿದ್ದಾರೆ.

Advertisement

ಪ್ರತಿಭಟಕಾರನೋರ್ವ ಪೊಲೀಸ್‌ ಪೇದೆ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿರುವ ರಜನೀಕಾಂತ್‌, “ಯಾವುದೇ ಸಮಸ್ಯೆಗೆ ಹಿಂಸೆಯು ಪರಿಹಾರವಲ್ಲ’ ಎಂದು ತಮ್ಮ ಅಭಿಪ್ರಾಯವನ್ನು ಖಡಕ್‌ ಆಗಿ ವ್ಯಕ್ತಪಡಿಸಿದ್ದಾರೆ.

ತಮಿಳು ನಾಡು ಮತ್ತು ಕರ್ನಾಕ ನಡುವಿನ ಕಾವೇರಿ ನೀರು ಹಂಚಿಕೆ ಕುರಿತಾಗಿ ಈಚೆಗೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ವಿರೋಧಿಸಿ ಚೆನ್ನೈನಲ್ಲಿನ ಐಪಿಎಲ್‌ ಪಂದ್ಯಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next