Advertisement

ರಜನಿಕಾಂತ್‌ ಪತ್ನಿಗೆ ನೋಟಿಸ್‌

07:02 AM May 12, 2019 | Team Udayavani |

ಬೆಂಗಳೂರು: ಜಾಹೀರಾತು ಕಂಪನಿಗೆ ವಂಚನೆ ಮಾಡಿದ ಆರೋಪದಡಿ ನಟ ರಜನಿಕಾಂತ್‌ ಪತ್ನಿ, ಲತಾ ರಜನಿಕಾಂತ್‌ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಹಲಸೂರು ಗೇಟ್‌ ಪೊಲೀಸರು ಸಮನ್ಸ್‌ ಜಾರಿ ಮಾಡಿದ್ದಾರೆ.

Advertisement

ಈ ಸಮನ್ಸ್‌ಗೆ ಪ್ರತಿಕ್ರಿಯೆ ನೀಡಿರುವ ಲತಾ ರಜನಿಕಾಂತ್‌ ಅವರು, “ನಾನು ಪ್ರವಾಸದಲ್ಲಿರುವುದರಿಂದ ತಾವು ಸೂಚಿಸಿದ ದಿನಾಂಕದಂದು ವಿಚಾರಣೆಗೆ ಬರಲು ಸಾಧ್ಯವಿಲ್ಲ. ಹೀಗಾಗಿ, ಮೇ 20ರ ಬಳಿಕ ವಿಚಾರಣೆಗೆ ಹಾಜರಾಗುತ್ತೇನೆ’ ಎಂದು ಉತ್ತರ ನೀಡಿದ್ದಾರೆ.

ರಜನಿಕಾಂತ್‌ ಅಭಿನಯದ ಕೊಚಾಡಿಯನ್‌ ಚಿತ್ರದ ಜಾಹೀರಾತು ಪ್ರಕಟಿಸಲು ಚೆನ್ನೈ ಮೂಲದ ಅಭಿಚಂದ್‌ ನಾಹರ್‌ ಅವರ ಆ್ಯಡ್‌ ಬ್ಯೂರೋ ಅಡ್ವಟೈಸಿಂಗ್‌ ಪ್ರೈವೇಟ್‌ ಲಿ.ಕಂಪನಿಗೆ ವಹಿಸಲಾಗಿದ್ದು, ಒಪ್ಪಂದ ಕೂಡ ಮಾಡಿಕೊಡಲಾಗಿತ್ತು. ಆದರೆ, ಅಂತಿಮವಾಗಿ ಕಂಪನಿಗೆ ನೀಡುವ ಸಂಭಾವನೆಯಲ್ಲಿ ಲತಾ ರಜನಿಕಾಂತ್‌ ಒಪ್ಪಂದಕ್ಕಿಂತ ಕಡಿಮೆ ಹಣ ಸಂದಾಯ ಮಾಡಿದ್ದರು ಎಂದು ಆರೋಪಿಸಲಾಗಿತ್ತು.

ಈ ಸಂಬಂಧ ಕಂಪನಿ ಮಾಲೀಕರು 2015ರಲ್ಲಿ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದ್ದರು. ಕೋರ್ಟ್‌ ಸೂಚನೆ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಹಲಸೂರು ಗೇಟ್‌ ಪೊಲೀಸರು ಮೇ 6ರಂದು ವಿಚಾರಣೆಗೆ ಹಾಜರಾಗುವಂತೆ ಮೇ 2ರಂದೇ ಸಮನ್ಸ್‌ ಜಾರಿ ಮಾಡಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next