Advertisement

Rajastan ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ಆಗಿದೆ: ಅಶೋಕ್‌ ಗೆಹ್ಲೋಟ್‌

12:09 AM Apr 13, 2023 | Pranav MS |

ಜೈಪುರ: ಭ್ರಷ್ಟಾಚಾರದ ವಿರುದ್ಧ ರಾಜಸ್ಥಾನ ಸರಕಾರ ಕ್ರಮ ಕೈಗೊಂಡಿದೆ. ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ದಳವು(ಎಸಿಬಿ) ಅನೇಕ ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ನಡೆಸಿದೆ ಎಂದು ರಾಜಸ್ಥಾನ ಮುಖ್ಯ­ಮಂತ್ರಿ ಅಶೋಕ್‌ ಗೆಹ್ಲೋಟ್‌ ಹೇಳಿದರು. ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಈಗಿನ ಕಾಂಗ್ರೆಸ್‌ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಮಂಗಳವಾರ ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ನಿರಶನ ನಡೆಸಿದರು.

Advertisement

ಈ ಹಿನ್ನೆಲೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಗೆಹ್ಲೋಟ್‌ , “ಭ್ರಷ್ಟಾಚಾರದ ವಿರುದ್ಧ ದೇಶದ ಯಾವುದೇ ರಾಜ್ಯದಲ್ಲಿ ತೆಗೆದುಕೊಳ್ಳದ ಕ್ರಮವನ್ನು ರಾಜಸ್ಥಾನ ಸರಕಾರ ತೆಗೆದುಕೊಂಡಿದೆ. ಹಣದುಬ್ಬರ ತಗ್ಗಿಸುವುದು ಈಗ ನಮ್ಮ ಮುಂದೆ ಇರುವ ಗುರಿ. ಇದನ್ನು ಹೊರತುಪಡಿಸಿ ಬೇರೆಡೆ ನಮ್ಮ ಲಕ್ಷ್ಯವನ್ನು ತಿರುಗಲು ಬಿಡುವುದಿಲ್ಲ,” ಎಂದರು.

ತಮ್ಮದೇ ಸರಕಾರದ ವಿರುದ್ಧ ನಿರಶನ ನಡೆಸಿದ ಮರು ದಿನವಾದ ಬುಧವಾರ ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ದಿಲ್ಲಿಗೆ ಆಗಮಿಸಿದ್ದಾರೆ. ಪೈಲಟ್‌ ನಿರಶನ ಸಂಬಂಧ ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ಅವರನ್ನು ರಾಜಸ್ಥಾನ ಕಾಂಗ್ರೆಸ್‌ ಉಸ್ತುವಾರಿ ರಾಂಧವಾ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next