Advertisement

ಗ್ರಾಮ ಮುಖ್ಯಸ್ಥೆಯನ್ನು ನೆಲದಲ್ಲಿ ಕೂರಿಸಿದ ರಾಜಸ್ಥಾನದ ಕೈ ಶಾಸಕಿ

05:45 AM Mar 20, 2019 | Team Udayavani |

ಜೋಧ್‌ಪುರ : ಗ್ರಾಮ ಸಭೆಯೊಂದರಲ್ಲಿ ಗ್ರಾಮ ಮುಖ್ಯಸ್ಥೆಯನ್ನು (ಮಹಿಳಾ ಸರಪಂಚ್‌ಳನ್ನು) ಕುರ್ಚಿಯಲ್ಲಿ ಕೂರಿಸುವ ಬದಲು ನೆಲದಲ್ಲಿ ಕೂರಿಸಿದುದಕ್ಕೆ ಕಾಂಗ್ರೆಸ್‌ ಶಾಸಕಿ ದಿವ್ಯಾ ಮಡೇರ್ನಾ ಕ್ಷಮೆ ಕೇಳಬೇಕು ಇಲ್ಲವೇ ನಮ್ಮ ಆಕ್ರೋಶವನ್ನು ಆಕೆ ಎದುರಿಸಬೇಕು ಎಂದು ರಾಜಸ್ಥಾನದ ಸರಪಂಚ್‌ ಸಂಘ ಎಚ್ಚರಿಕೆ ನೀಡಿದೆ. 

Advertisement

ಕಳೆದ ಶನಿವಾರ ಜೋಧ್‌ಪುರ ಜಿಲ್ಲೆಯ ಓಸಿಯನ್‌ ಪ್ರದೇಶದಲ್ಲಿನ ಗ್ರಾಮ ಸಭೆಯೊಂದರಲ್ಲಿ ಖೇತಸಾರ್‌ ಗ್ರಾಮ ಮುಖ್ಯಸ್ಥೆಯನ್ನು ಶಾಸಕಿ ದಿವ್ಯಾ ಮಡೇರ್ನಾ ಅವರು ನೆಲದಲ್ಲಿ ಕೂರುವಂತೆ ಹೇಳಿ ಆಕೆಯನ್ನು ಅವಮಾನಿಸಿದ್ದರು ಎಂದು ರಾಜಸ್ಥಾನ ಸರಪಂಚ್‌ ಸಂಘ ಆರೋಪಿಸಿದೆ. 

“ಶಾಸಕಿ ದಿವ್ಯಾ ಅವರು ತಾವು ಮಹಿಳಾ ಸರಪಂಚ್‌ಗೆ ಗೈದಿರುವ ಅವಮಾನಕ್ಕಾಗಿ ಕ್ಷಮೆ ಕೇಳಬೇಕು; ಇಲ್ಲದಿದ್ದರೆ ಆಕೆ ನಮ್ಮ ಆಕ್ರೋಶವನ್ನು ಎದುರಿಸಬೇಕಾದೀತು ಎಂದು ರಾಜಸ್ಥಾನ ಸರಪಂಚ್‌ ಸಂಘದ ಅಧ್ಯಕ್ಷ ಭಂವರ್‌ಲಾಲ್‌ ಹೇಳಿದ್ದಾರೆ. 

ನಾನೊಬ್ಬ ಮಹಿಳೆಯಾಗಿ, ಅದೂ ಸರಪಂಚಳಾಗಿ, ನನ್ನ ವಿರುದ್ಧ  ಒಬ್ಬ ಮಹಿಳಾ ಜನಪ್ರತಿನಿಧಿಯಿಂದ ಈ ರೀತಿಯ ವರ್ತನೆಯನ್ನು ನಾನು ನಿರೀಕ್ಷಿಸಿರಲಿಲ್ಲ; ನನಗೆ ತುಂಬಾ ದುಃಖ, ನೋವು, ಅವಮಾನವಾಗಿದೆ’ ಎಂದು ಗ್ರಾಮ ಮುಖ್ಯಸ್ಥೆ ಚಂದು ದೇವಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next