Advertisement

ಕಡಬ: ರಸ್ತೆಯಲ್ಲೇ ಹರಿವ ಮಳೆನೀರು

10:38 AM Jul 19, 2022 | Team Udayavani |

ಕಡಬ: ಕಡಬದ ಮೂಲಕ ಹಾದು ಹೋಗುವ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಳಾರದಿಂದ ಮರ್ದಾಳದ ತನಕ ರಸ್ತೆಯ ಬದಿಯ ಚರಂಡಿಯಲ್ಲಿ ಹರಿದು ಹೋಗಬೇಕಾದ ಮಳೆನೀರು ರಸ್ತೆಯಲ್ಲಿಯೇ ಹರಿದು ಹೋಗುತ್ತಿದೆ. ಈ ಮೂಲಕ ಕೋಟಿಗಟ್ಟಲೆ ರೂ. ವೆಚ್ಚದಲ್ಲಿ ನಿರ್ಮಾಣವಾದ ರಸ್ತೆ ಹಾನಿಗೊಳ್ಳುತ್ತಿದೆ.

Advertisement

ಕಳಾರ, ತಹಶೀಲ್ದಾರ್‌ ಕಚೇರಿ ಮುಂಭಾಗ, ಕಡಬದ ಕೆರೆಯ ಬಳಿ, ಕ್ನಾನಾಯ ಜ್ಯೋತಿ ಶಾಲೆಯ ಬಳಿ ಯಲ್ಲಂತೂ ಜೋರಾಗಿ ಮಳೆ ಬಂದಾಗ ಮಳೆ ನೀರೆಲ್ಲ ರಸ್ತೆಗೆ ಬಂದು ಜನರು ನಡೆದು ಹೋಗುವುದಕ್ಕೂ ಸಾಧ್ಯವಾಗುತ್ತಿಲ್ಲ. ಪಾದಚಾರಿಗಳಿಗೆ ಇಲ್ಲಿ ನಿತ್ಯ ಕೆಸರು ನೀರ ಅಭಿಷೇಕ. ಚರಂಡಿ ಸರಿಪಡಿಸಲು ಕ್ರಮ ಕೈಗೊಳ್ಳಬೇಕಾದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾತ್ರ ತಮಗೂ ಈ ಸಮಸ್ಯೆಗೂ ಸಂಬಂಧವಿಲ್ಲದಂತೆ ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸಾರ್ವಜನಿಕರು ತಮ್ಮ ಅಂಗಡಿ ಹಾಗೂ ಮನೆಗಳನ್ನು ಸಂಪರ್ಕಿಸುವ ದಾರಿಯಲ್ಲಿ ರಸ್ತೆ ಬದಿಯ ಚರಂಡಿಗಳನ್ನು ಮುಚ್ಚುತ್ತಾರೆ. ಆ ಮೂಲಕ ಚರಂಡಿಯಲ್ಲಿ ಮಳೆನೀರು ಸರಾಗವಾಗಿ ಹರಿದು ಹೋಗದಂತೆ ತಡೆಯೊಡ್ಡುತ್ತಿದ್ದಾರೆ. ಇದ ರಿಂದ ಮಳೆನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ಕೆಲವು ಕಡೆ ಮನೆಗಳನ್ನು ಸಂಪರ್ಕಿಸುವ ದಾರಿಗೆ ಹಾಕಲಾಗಿರುವ ಮೋರಿ ಯಿಂದಾಗಿ ನೀರು ಸರಾಗವಾಗಿ ಹರಿಯಲು ಸಮಸ್ಯೆ ಉಂಟಾಗುತ್ತಿದೆ. ಚರಂಡಿಗಳನ್ನು ಮುಚ್ಚಿ ರಸ್ತೆ ಹಾನಿಗೊಳ್ಳುವಂತೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈ ಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹ.

ಸೂಕ್ತ ಕ್ರಮ ಕೈಗೊಳ್ಳಲಾಗುವುದು: ಕಡಬ ಭಾಗದ ಸಹಾಯಕ ಎಂಜಿನಿಯರ್‌ಗೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿ ರಸ್ತೆಯಲ್ಲಿ ಮಳೆನೀರು ಹರಿಯುವ ಕಡೆ ಚರಂಡಿಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. –ರಾಜಾರಾಮ್‌, ಎಇಇ, ಲೋಕೋಪಯೋಗಿ ಇಲಾಖೆ, ಪುತ್ತೂರು.

Advertisement

Udayavani is now on Telegram. Click here to join our channel and stay updated with the latest news.

Next