Advertisement

ನಾಗರಕೆರೆ ತುಂಬಿ ಕೋಡಿ ಹರಿಯಲೆಂದು ಬಾಗಿನ

04:16 PM Oct 13, 2021 | Team Udayavani |

ದೊಡ್ಡಬಳ್ಳಾಪುರ: ನಗರದ ಇತಿಹಾಸ ಪ್ರಸಿದ್ಧ ನಾಗರಕೆರೆಯಲ್ಲಿ ಸಾಕಷ್ಟು ನೀರು ಬಂದಿದ್ದು, ಕೆರೆ ತುಂಬಿ ಕೋಡಿ ಹರಿಯಲೆಂದು ನಾಗರಿಕರು ನಗರಸಭೆ ಸದಸ್ಯ ಜಿ. ನಾಗರಾಜ್‌ ನೇತೃತ್ವದಲ್ಲಿ ಕೆರೆಗೆ ಬಾಗಿನ ಅರ್ಪಿಸಿದರು. ಈ ವೇಳೆ 8ನೇ ವಾರ್ಡ್‌ ನಗರಸಭೆ ಸದಸ್ಯ ಜಿ. ನಾಗರಾಜ್‌ ಮಾತನಾಡಿ, 5 ದಿನಗಳಿಂದ ಸುರಿಯುತ್ತಿರುವ ಮಳೆಗೆ ತಾಲೂಕಿನ ಶೇಕಡಾವಾರು ಕೆರೆ, ಕುಂಟೆಗಳು ತುಂಬಿ ಹರಿಸುತ್ತಿವೆ.

Advertisement

ಉತ್ತಮವಾಗಿ ಮಳೆಯಾದರೂ ಕರೆ ತುಂಬಿ ಹರಿಯದೇ ಇರುವುದು ನೋವಿನ ಸಂಗತಿ. ಅವೈಜ್ಞಾನಿಕವಾಗಿ ಕೆರೆಯಲ್ಲಿ ಒಳಚರಂಡಿಯ ಕೊಳವೆ ನಿರ್ಮಿಸಲಾಗಿದೆ. ಇವುಗಳು ದುರಸ್ತಿ ಹಂತಕ್ಕೆ ತಲುಪಿ ಅವುಗಳಿಂದ ಮಳೆ ನೀರು ಚರಂಡಿ ಮೂಲಕ ಹೊರ ಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕೆರೆ ಉತ್ತಮವಾಗಿ ಅಭಿವೃದ್ಧಿಯಾಗಲು ತಮ್ಮ ಸಹಕಾರ ಇರುವುದಾಗಿ ತಿಳಿಸಿದರು. ವಹಿ°ಕುಲು ಕ್ಷತ್ರಿಯ ತಿಗಳ ಜನಾಂಗದ ಎಸ್‌. ರಂಗಸ್ವಾಮಿ, ನರಸಿಂಹಮೂರ್ತಿ, ಆಂಜನೇಯರೆಡ್ಡಿ, ಮಹೇಶ್‌, ರಾಮಣ್ಣ, ನರೇಂದ್ರ, ಮಹದೇವ್‌ ಹಾಗೂ ಸ್ಥಳೀಯರು ಇದ್ದರು.

21 ವರ್ಷದ ನಂತರ ತುಂಬಿದ ಮೆಳೇಕೋಟೆ ಕೆರೆ

ದೊಡ್ಡಬಳ್ಳಾಪುರ: ತಾಲೂಕಿನ ಪುರಾತನವಾದ ಮೆಳೇಕೋಟೆ ಕೆರೆ ಸತತ ಮಳೆಯಿಂದ ಮಂಗಳವಾರ ಮುಂಜಾನೆ ಕೋಡಿ ಹರಿದಿದ್ದು, ಜನರ ಮನದಲ್ಲಿ ಸಂತಸ ಮನೆ ಮಾಡಿದೆ. ಸುಮಾರು 21 ವರ್ಷದ ನಂತರ ಕೋಡಿ ಹರಿಯುತ್ತಿರುವ ಮೆಳೇಕೋಟೆ ಕೆರೆಯನ್ನು ಗ್ರಾಮಸ್ಥರು ವೀಕ್ಷಿಸಿ ಸಂಭ್ರಮಿಸಿದರು.

Advertisement

1926ರಲ್ಲಿ ಸುಮಾರು 86 ಎಕರೆ ವಿಸ್ತೀರ್ಣದಲ್ಲಿ ಈ ಕೆರೆಯನ್ನು ನಿರ್ಮಿಸಲಾಗಿದೆ. 2020ರಲ್ಲಿ ಅಲ್ಪ ಪ್ರಮಾಣದಲ್ಲಿ ಕೋಡಿ ಹರಿದಿದ್ದು, ಇಂದು ಪೂರ್ಣ ಪ್ರಮಾಣದಲ್ಲಿ ತುಂಬಿ ಬೀಡಿಕೆರೆಗೆ ನೀರು ಹರಿಯುತ್ತಿದೆ. ಕೆರೆಗೆ ಸಾರ್ವಜನಿಕರ ಸಹಯೋಗದೊಂದಿಗೆ ಕೆಲ ವರ್ಷದ ಹಿಂದೆ ಆಗಿನ ಜಿÇÉಾಧಿಕಾರಿ ಕರೀಗೌಡ ನೇತೃತ್ವದಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿತ್ತು. ತಾಲೂಕಿನ ಮೆಣಸಿ ಕೆರೆ, ಹುಸ್ಕೂರು ಕೆರೆಗಳು ಸಹ ತಂಬಿ ಕೋಡಿ ಹರಿಯುತ್ತಿವೆ. ಮೆಣಸಿ ಕೆರೆ 25 ವರ್ಷಗಳ ಹಿಂದೆ ತಂಬಿದ್ದು, ಈಗ ತುಂಬಿ ಹರಿಯುತ್ತಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next