Advertisement

ಚೀನಾ ಕಂಪೆನಿಯೊಂದಿಗಿನ ಒಪ್ಪಂದ ರದ್ದುಮಾಡಿಕೊಂಡ ಇಂಡಿಯನ್ ರೈಲ್ವೇ

08:15 PM Jun 18, 2020 | Hari Prasad |

ನವದೆಹಲಿ: ಉತ್ತರ ಪ್ರದೇಶದ ಕಾನ್ಪುರದಿಂದ ದೀನ್ ದಯಾಳ್ ಉಪಾಧ್ಯಾಯ ರೈಲ್ವೇ ನಿಲ್ದಾಣದವರೆಗಿನ 417 ಕಿಲೋ ಮೀಟರ್ ದೂರದ ರೈಲ್ವೇ ಮಾರ್ಗದಲ್ಲಿ ಸಿಗ್ನಲ್ ಹಾಗೂ ದೂರಸಂಪರ್ಕ ನೆಟ್ ವರ್ಕ್ ಅನ್ನು ಸ್ಥಾಪಿಸುವ ಕಾಮಗಾರಿಯ ಗುತ್ತಿಗೆಯನ್ನು ವಹಿಸಿಕೊಂಡಿದ್ದ ಚೀನಾದ ಕಂಪೆನಿಯ ಗುತ್ತಿಗೆಯನ್ನು ಭಾರತೀಯ ರೈಲ್ವೇ ರದ್ದುಗೊಳಿಸಿದೆ.

Advertisement

ಈ ಕಾಮಗಾರಿಗಾಗಿ ಚೀನಾ ಮೂಲದ ಬೀಜಿಂಗ್ ರೈಲ್ವೇ ರಿಸರ್ಚ್ ಆ್ಯಂಡ್ ಡಿಸೈನ್ ಇನ್ ಸ್ಟಿಟ್ಯೂಟ್ ಆಫ್ ಸಿಗ್ನಲ್ ಆ್ಯಂಡ್ ಕಮ್ಯುನಿಕೇಷನ್ ಗ್ರೂಪ್ ಕಂ. ಲಿಮಿಟೆಡ್ ಹೆಸರಿನ ಎಂಜಿನಿಯರಿಂಗ್ ಕಂಪೆನಿ 2016ರಲ್ಲಿ ಗುತ್ತಿಗೆಯನ್ನು ಪಡೆದುಕೊಂಡಿತ್ತು.

ವಿಶ್ವಬ್ಯಾಂಕ್ ನ ಸಾಲದ ಅಡಿಯಲ್ಲಿ ಈ ಕಾಮಗಾರಿಯನ್ನು ನಿರ್ವಹಿಸಲಾಗುತ್ತಿತ್ತು. ಆದರೆ ಗುತ್ತಿಗೆಯಲ್ಲಿನ ನಿಯಮಗಳನ್ನು ಈ ಕಂಪೆನಿಯು ಪಾಲಿಸದೇ ಇದ್ದ ಕಾರಣದಿಂದ ಈ ಕಂಪೆನಿಯ ಗುತ್ತಿಗೆಯನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ.

ಲಢಾಕ್ ನ ಗಲ್ವಾನ್ ಭಾಗದಲ್ಲಿ ಚೀನಾ ಸೈನಿಕರು 20 ಬಾರತೀಯ ಯೋಧರನ್ನು ಹತ್ಯೆ ಮಾಡಿದ ಘಟನೆಯ ಬಳಿಕ ದೇಶಾದ್ಯಂತ ಚೀನಾ ವಿರುದ್ಧ ಆಕ್ರೋಶ ಹೆಚ್ಚುತ್ತಿದ್ದು ಈ ಹಿನ್ನಲೆಯೂ ಸಹ ಈ ಗುತ್ತಿಗೆ ರದ್ದು ವಿಚಾರಕ್ಕೆ ಪುಷ್ಟಿ ನೀಡಿದೆ ಎನ್ನಲಾಗುತ್ತಿದೆ.

ಚೀನಾದ ಈ ಕಂಪೆನಿಯು ಕಾಮಗಾರಿ ಗುತ್ತಿಗೆ ವಹಿಸಿಕೊಂಡ ನಾಲ್ಕು ವರ್ಷಗಳ ಬಳಿಕವೂ ಕೇವಲ 20 ಪ್ರತಿಶತ ಕೆಲಸವನ್ನು ಮಾತ್ರವೇ ಮುಗಿಸಿದೆ ಮತ್ತು ಈ ಮೂಲಕ ಕಂಪೆನಿಯು 471 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಿದೆ ಎಂದು ಅಂದಾಜಿಸಲಾಗಿದೆ ಎಂದು ರೈಲ್ವೇ ಸಚಿವಾಲಯದ ಮಾಹಿತಿಯನ್ನು ಆಧರಿಸಿ ಇಂಡಿಯಾ ಟುಡೇ ವೆಬ್ ಸೈಟ್ ವರದಿ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next