Advertisement

ರಾಯಬಾಗ: ಪ್ರತಿಭಾ ಪುರಸ್ಕಾರ ಸದುಪಯೋಗವಾಗಲಿ- ಸ್ವಾಮೀಜಿ

03:31 PM Oct 14, 2024 | Team Udayavani |

ಉದಯವಾಣಿ ಸಮಾಚಾರ 
ರಾಯಬಾಗ: ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಪಡೆಯಲು ಪರಿಶ್ರಮ, ವಿನಯಶೀಲತೆ, ಸಕಾರಾತ್ಮಕ ವಿಚಾರ, ಆತ್ಮವಿಶ್ವಾಸ ಹೊಂದಿ ಸತತ ಪ್ರಯತ್ನ ಮಾಡಬೇಕೆಂದು ಕೊಲ್ಲಾಪುರ ಜೈನ ಮಠದ ಲಕ್ಷ್ಮೀ ಸೇನ ಭಟ್ಟಾರಕ
ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

Advertisement

ರವಿವಾರ ಪಟ್ಟಣದ ಮಹಾವೀರ ಭವನದಲ್ಲಿ ಅರಿಹಂತ ಚಾರಿಟೇಬಲ್‌ ಫೌಂಡೇಶನ್‌ ದಶಮಾನೋತ್ಸವ ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಂಡಿದ್ದ ತಾಲೂಕಿನ ಜೈನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಂಸ್ಥೆ ತಾಲೂಕಿನ ಬಡ ಪ್ರತಿಭಾವಂತ ಜೈನ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಪುರಸ್ಕಾರ ನೀಡುತ್ತಿದ್ದು ಇದರ ಸದುಪಯೋಗವನ್ನು ಪಡೆದ ವಿದ್ಯಾರ್ಥಿಗಳು ಸಮಾಜದ ಕೀರ್ತಿಯನ್ನು ಎತ್ತರಕ್ಕೆ ಬೆಳೆಸಬೇಕು. ತಮ್ಮ ಸೇವೆಯನ್ನು ದೇಶಕ್ಕೆ, ಸಮಾಜದ ಶ್ರೇಯೋಭಿವೃದ್ಧಿಗೆ ಮೀಸಲಿಡಬೇಕೆಂದರು.

ನಿವೃತ್ತ ಅಧ್ಯಾಪಕ ತವನಪ್ಪ ಜೋಡಟ್ಟಿ ಮಾತನಾಡಿ, ವಿದ್ಯೆ ವಿದ್ಯಾರ್ಥಿ ಕೇಂದ್ರಿತವಾಗಿದ್ದು, ಅಧ್ಯಯನದಿಂದ ಜ್ಞಾನ ವೃದ್ಧಿಯಾಗಿ ಏಕಾಗ್ರತೆ ಹೆಚ್ಚುತ್ತದೆ. ಯಶಸ್ವಿ ವ್ಯಕ್ತಿಯಾಗಬೇಕಾದರೆ ಸತತ ಅಧ್ಯಯನ ಶೀಲರಾಗಬೇಕೆಂದರು. ಪುರಸ್ಕಾರ ದಾನಿಗಳಾದ ಅನಿಲ ಹಂಜೆ, ರೂಪಾ ಹಂಜೆ ದಂಪತಿ ಹಾಗೂ ತಾಲೂಕಿನ 120 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.

ಫೌಂಡೇಶನ್‌ ಅಧ್ಯಕ್ಷ ಡಿ.ಸಿ.ಸದಲಗಿ, ಉಪಾಧ್ಯಕ್ಷ ಸಂಜಯ ಬಡೋರೆ, ಕಾರ್ಯದರ್ಶಿ ಮಲ್ಲಪ್ಪ ಖಾನಟ್ಟಿ, ನಿರ್ದೇಶಕರಾದ ಈರಗೌಡ ಪಾಟೀಲ, ದಶರಥ ಶೆಟ್ಟಿ, ಶೀತಲ ಬೇಡಕಿಹಾಳೆ, ಸಂಜಯ ಹಂಜೆ, ಪಾರೀಶ ಉಗಾರೆ, ನೇಮಿನಾಥ ಅಸ್ಕಿ, ವರ್ಧಮಾನ ಬನವಣೆ, ಭರತೇಶ ಪಾಟೀಲ ಹಾಗೂ ಶಾಂತಿನಾಥ ಶೆಟ್ಟಿ, ಸುಜಾತ ಪಾಟೀಲ, ಧೂಳಗೌಡ ಪಾಟೀಲ, ಜಿನ್ನಪ್ಪ ಬಡೋರೆ,
ಧನಪಾಲ ಹಳಿಂಗಳಿ, ಮಹಾವೀರ ನಿಲಜಗಿ, ಸಮ್ಮೇದ ಪಾಟೀಲ, ವಿವೇಕ ಶೆಟ್ಟಿ, ಸೇರಿ ಅನೇಕರು ಇದ್ದರು. ಕಾರ್ಯದರ್ಶಿ ಮಲ್ಲಪ್ಪ ಖಾನಟ್ಟಿ ಸ್ವಾಗತಿಸಿದರು. ವೀರಶ್ರೀ ಸಮಾಜೆ ನಿರೂಪಿಸಿದರು, ವೀಣಾ ಹುಲಬತ್ತೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next