Advertisement

ಮಂದಿರಕ್ಕೆ ರಾಹುಲ್‌ ಪೂರಕ: ಪೇಜಾವರ ಶ್ರೀ

12:30 AM Feb 16, 2019 | Team Udayavani |

ಉಡುಪಿ: ರಾಮಮಂದಿರ ಕುರಿತು ಸಂವಿಧಾನ, ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯ ಬಾರದೆ ಅಧ್ಯಾದೇಶದಂತಹ ಕ್ರಮ ಸರಿಯಲ್ಲ. ಲೋಕಸಭಾ ಚುನಾವಣೆ ಬಳಿಕ ಯಾವ ಪಕ್ಷವೂ ಅಧಿಕಾರಕ್ಕೆ ಬರಬಹುದು. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರೂ ಹಿಂದೂ ಪರವಾಗಿರುವುದರಿಂದ ಮಂದಿರ ನಿರ್ಮಾಣಕ್ಕೆ ಯಾವುದೇ ತೊಂದರೆಯಾಗದು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಮಂದಿರ ಕುರಿತಂತೆ ಆರೆಸ್ಸೆಸ್‌ ಸರಸಂಘಚಾಲಕ ಮೋಹನ್‌ ಭಾಗವತರಲ್ಲಿಯೂ ಮಾತನಾಡಿದ್ದೇನೆ. ಚುನಾವಣೆಯ ವರೆಗೆ ಆತುರದ ನಿರ್ಣಯ ತರವಲ್ಲ ಎಂಬ ಅಭಿಪ್ರಾಯ ಬಂದಿದೆ ಎಂದರು. ವಿಶ್ವ ಹಿಂದೂ ಪರಿಷತ್‌ ಅಧಿಕಾರದ, ಆದರೆ ಸರಕಾರ ವಶಪಡಿಸಿಕೊಂಡಿರುವ 60 ಎಕ್ರೆ ಭೂಮಿಯನ್ನು ಹಸ್ತಾಂತರಿಸಿದರೆ ಕಾನೂನು ತೊಡಕಾಗದು. ಇದು ವಿವಾದಾಸ್ಪದ ಭೂಮಿಯಲ್ಲ ಎಂದರು. 

ಪ್ರಧಾನಿ ಮೋದಿ ಮತ್ತು ಸಿಎಂ ಕುಮಾರಸ್ವಾಮಿಯವರ ಬಜೆಟ್‌ಗೆ ಸ್ವಾಮೀಜಿ ಮೆಚ್ಚುಗೆ ಸೂಚಿಸಿದರು. ಯಡಿಯೂರಪ್ಪ ಟೇಪ್‌ ಹಗರಣ ಕುರಿತು ಪ್ರಶ್ನಿಸಿದಾಗ ತನಿಖೆ ನಡೆಯುತ್ತದೆಯಲ್ಲ, ಅದರಲ್ಲಿ ತಿಳಿಯುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next