Advertisement

ರಾಹುಲ್‌ ಬ್ರಾಹ್ಮಣ ಎಂದು ಜನಿವಾರ ತೋರಿಸೋ ಸ್ಥಿತಿ ಬಂದಿದೆ

01:26 AM Feb 23, 2019 | |

ಹುಬ್ಬಳ್ಳಿ: ಹಿಂದೂಗಳನ್ನು ಸದಾ ಕಡೆಗಣಿಸುತ್ತಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ಈಗ ತಾನು ಹಿಂದೂ ಬ್ರಾಹ್ಮಣ ಎಂದು ಹೇಳಿಕೊಂಡು ಎಲ್ಲ ಜನರಿಗೆ ಜನಿವಾರ ತೋರಿಸುವ ಸ್ಥಿತಿ ಬಂದಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳ ಬಗ್ಗೆ ನಂಬಿಕೆ, ಶ್ರದ್ಧೆ ಇಲ್ಲದೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದ ರಾಹುಲ್‌, ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ತಾನು ಹಿಂದೂ ಎಂದು ಹೇಳಿಕೊಳ್ಳುತ್ತಿದ್ದಾರೆ. ಶಿರಡಿ, ತಿರುಪತಿ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದರು.

ಕಾಂಗ್ರೆಸ್‌ನದ್ದು ನಕಲಿ ಮಾಡುವ ಸಂಸ್ಕೃತಿ. ಗಾಂಧಿ ಕುಟುಂಬದವರು ಯಾರೂ ಕೂಡ ಸರಿಯಾಗಿ ಶಾಲೆ ಕಲಿತಿಲ್ಲ. ಅವರದು ನಕಲಿ ಕುಟುಂಬ. ಬಿಜೆಪಿ ಮಿಸ್ಡ್ ಕಾಲ್‌ ನೀಡಿ ಪಕ್ಷದ ಸದಸ್ಯತ್ವ ಅಭಿಯಾನ ಆರಂಭಿಸಿದಾಗ ಇದನ್ನು ಟೀಕಿಸಿದ್ದ ಕಾಂಗ್ರೆಸ್‌ ಈಗ ತಾನೂ ಕೂಡ ಮಿಸ್ಡ್ ಕಾಲ್‌ ನೀಡಿ ಸದಸ್ಯತ್ವ ಮಾಡಿ ಕೊಳ್ಳುವ ಅಭಿಯಾನ ಆರಂಭಿಸಿದೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next