Advertisement

ಕುಂಟು ನೆಪ ಬಿಡಿ ಮಹದಾಯಿ ಬಗೆಹರಿಸಿ : ರಾಹುಲ್‌ ಆಗ್ರಹ

06:00 AM Feb 27, 2018 | Team Udayavani |

ಹುಬ್ಬಳ್ಳಿ: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ನಿರೀಕ್ಷೆಯಂತೆ ತಮ್ಮ ಜನಾಶೀರ್ವಾದ ಯಾತ್ರೆಯ ಕೊನೆಯ ದಿನ ಮಹದಾಯಿ ವಿವಾದ ಪ್ರಸ್ತಾಪಿಸಿ, ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಿದ್ದಾರೆ.

Advertisement

ಸೋಮವಾರ ಸಂಜೆ ಇಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಪ್ರಧಾನಿ ಮೋದಿಯವರು ಮಧ್ಯಪ್ರವೇಶಿಸಿ ವಿವಾದ ಬಗೆಹರಿಸಬೇಕೆಂದು ಒತ್ತಾಯಿಸಿದ ಅವರು, ಮಹದಾಯಿ ವಿವಾದ ಇತ್ಯರ್ಥ ಪಡಿಸಲು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು  ಪರಿಹಾರ ಕಂಡು ಹಿಡಿಯಲು ಸಲಹೆ ನೀಡಿದರು.

ಕುಂಟು ನೆಪ ಹೇಳುವುದನ್ನು ಬಿಟ್ಟು ಈ ಭಾಗದ ಜನರ ಸಮಸ್ಯೆಗೆ ಮೊದಲು ಸ್ಪಂದಿಸಿ. ಉತ್ತರ ಕರ್ನಾಟಕ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅದಕ್ಕಾಗಿ ಶೀಘ್ರವೇ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಬೇಕೆಂದು ರಾಹುಲ್‌ ಆಗ್ರಹಿಸಿದರು. ಇದೇ ವೇಳೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ದ ವಾಗ್ಧಾಳಿ ನಡೆಸಿದರು.

ರಫೆಲ್‌ ಖರೀದಿ ದರ ಬಹಿರಂಗ ಪಡೆಸಿ
ಕೇಂದ್ರ ಸರ್ಕಾರ ಫ್ರಾನ್ಸ್‌ ಜೊತೆಗೆ ರಫೆಲ್‌ ಯುದ್ದ ವಿಮಾನ ಖರೀದಿ ಮಾಡಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದು ಅದಕ್ಕೆ ಎಷ್ಟು ದರ ನೀಡಿದ್ದಾರೆಂದು ರಾಷ್ಟ್ರದ ಜನತೆಗೆ ತಿಳಿಸಬೇಕು. ದೇಶದ ಜನತೆಗೆ ತಿಳಿಸದಂತ ಗೌಪ್ಯತೆ ಅದರಲ್ಲೇನಿದೆ ಎಂದು ಪ್ರಧಾನಿ ಹೇಳಬೇಕೆಂದು ರಾಹುಲ್‌ ಒತ್ತಾಯಿಸಿದರು. ದೇಶದ ರಕ್ಷಣಾ ಸಚಿವರನ್ನು ಈ ಬಗ್ಗೆ ಕೇಳಿದರೆ, ಶೀಘ್ರವೇ ರಫೆಲ್‌ ಖರೀದಿ ದರದ ಮಾಹಿತಿ ನೀಡುವುದಾಗಿ ಹೇಳಿದ್ದರು. ಈಗ ಫ್ರಾನ್ಸ್‌ ಮತ್ತು ಭಾರತ ಸರ್ಕಾರದ ನಡುವಿನ ಗೌಪ್ಯತೆ ಕಾಪಾಡಲು ಬಹಿರಂಗ ಪಡಿಸಲು ಆಗುವುದಿಲ್ಲ ಎಂದು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next