Advertisement

ಪಿತ್ರೋಡ ಜೀ, ನಿಮಗೆ ನಾಚಿಕೆಯಾಗಬೇಕು, ನೀವು ದೇಶದ ಕ್ಷಮೆಯಾಚಿಸಬೇಕು: ರಾಹುಲ್‌

10:01 AM May 14, 2019 | Team Udayavani |

ಖನ್ನಾ , ಪಂಜಾಬ್‌ : 1984ರ ಸಿಕ್ಖ್ ವಿರೋಧಿ ನರಮೇಧಕ್ಕೆ ಸಂಬಂಧಿಸಿ ‘ಹುವಾ ತೋ ಹುವಾ – ಆದದ್ದು ಆಗಿ ಹೋಯಿತು, ಏನೀಗ ?’ ಎಂದು ಕಾಂಗ್ರೆಸ್‌ ನ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಯಾಮ್‌ ಪಿತ್ರೋಡ ನೀಡಿದ್ದ ವಿವಾದಾತ್ಮಕ ಹೇಳಿಕೆ ಈಗ ಕಾಂಗ್ರೆಸ್‌ ಮುಖ್ಯಸ್ಥ ರಾಹುಲ್‌ ಗಾಂಧಿ ಅವರಿಗೆ ಪಂಜಾಬ್‌ ನಲ್ಲಿ ತಿರುಗುಬಾಣವಾಗಿದೆ.

Advertisement

ಪಂಜಾಬ್‌ ನ ಮೊದಲ ಚುನಾವಣಾ ರಾಲಿಯಲ್ಲಿಂದು ಮಾತನಾಡಿದ ರಾಹುಲ್‌ ಗಾಂಧಿ, “ಹುವಾ ತೋ ಹೇಳಿಕೆ ನೀಡಿದ್ದ ಪಿತ್ರೋಡ ಗೆ ನಾಚಿಕೆಯಾಗಬೇಕು; ಅವರು ಈ ಹೇಳಿಕೆಗಾಗಿ ದೇಶದ ಕ್ಷಮೆಯಾಚಿಸಬೇಕು’ ಎಂದು ಬಹಿರಂಗವಾಗಿ ಹೇಳುವ ಮೂಲಕ ಪಕ್ಷಕ್ಕೆ ಈಗಾಗಲೇ ಆಗಿರುವ ಭಾರೀ ಹಾನಿಯನ್ನು ಕಡಿಮೆಗೊಳಿಸುವ ಪ್ರಯತ್ನ ಮಾಡಿದರು.

ರಾಹುಲ್‌ ಗಾಂಧಿ ಅವರು ಈ ಮೊದಲೇ ಪಿತ್ರೋಡ ಅವರ ಹುವಾ ತೋ ಹುವಾ ಹೇಳಿಕೆಗೆ ತನ್ನ ಸಹಮತ ಇಲ್ಲ ಎಂದಿದ್ದರಲ್ಲದೆ ಅವರ ಹೇಳಿಕೆಯಿಂದ ದೂರ ಸರಿದಿದ್ದರು.

‘1984ರ ಸಿಕ್ಖ್ ವಿರೋಧಿ ಹಿಂಸೆ ಬಗ್ಗೆ ಸ್ಯಾಮ್‌ ಪಿತ್ರೋಡ ನೀಡಿದ್ದ ಹೇಳಿಕೆ ಸಂಪೂರ್ಣವಾಗಿ ತಪ್ಪು; ಅದಕ್ಕಾಗಿ ಅವರು (ಪಿತ್ರೋಡ) ದೇಶದ ಕ್ಷಮೆಯಾಚಿಸಬೇಕು; ನಾನಿದನ್ನು ಸಾರ್ವಜನಿಕವಾಗಿ ಹೇಳುತ್ತಿದ್ದೇನೆ; ಅವರಿಗೆ ಫೋನ್‌ ಮೂಲಕ ಈಗಾಗಲೇ ನಾನಿದನ್ನು ಹೇಳಿದ್ದೇನೆ. ಪಿತ್ರೋಡ ಜೀ, ನೀವು ಹೇಳಿರುವುದು ಸಂಪೂರ್ಣ ತಪ್ಪು; ಆ ಬಗ್ಗೆ ನಿಮಗೆ ನಾಚಿಕೆಯಾಗಬೇಕು; ಅದಕ್ಕಾಗಿ ನೀವು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು’ ಎಂದು ರಾಹುಲ್‌ ಗಾಂಧಿ ಇಂದಿಲ್ಲಿ ಮಾಡಿದ ಚುನಾವಣಾ ಪ್ರಚಾರ ಭಾಷಣದ ಕೊನೆಯಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next