Advertisement

ಈಶಾನ್ಯ ರಾಜ್ಯಗಳ ಜನಾದೇಶ ಗೌರವಿಸುತ್ತೇವೆ : ರಾಹುಲ್‌ ಗಾಂಧಿ

03:55 PM Mar 05, 2018 | udayavani editorial |

ಹೊಸದಿಲ್ಲಿ : ಈಶಾನ್ಯ ರಾಜ್ಯಗಳಾದ ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್‌ನ‌ಲ್ಲಿ ಕಾಂಗ್ರೆಸ್‌ ಅನುಭವಿಸಿರುವ ದಯನೀಯ ಸೋಲಿನ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೊನೆಗೂ ತನ್ನ ಮೌನ ಮುರಿದಿದ್ದಾರೆ. 

Advertisement

ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್‌ ಜನಾದೇಶವನ್ನು ಕಾಂಗ್ರೆಸ್‌ ಪಕ್ಷ ಗೌರವಿಸುತ್ತದೆ ಎಂದು ರಾಹುಲ್‌ ಟ್ವಿಟರ್‌ನಲ್ಲಿ ಇದೇ ಮೊದಲ ಬಾರಿಗೆ ಪಕ್ಷದ ಸೋಲಿಗೆ ಪ್ರತಿಕ್ರಿಯಿಸಿದ್ದಾರೆ.

“ಈಶಾನ್ಯ ರಾಜ್ಯಗಳಲ್ಲಿನ ನಮ್ಮ ಪಕ್ಷದ ಸೋಲನ್ನು ನಾವು ಒಪ್ಪಿಕೊಳ್ಳುತ್ತೇವೆ; ಜನಾದೇಶವನ್ನು ಗೌರವಿಸುತ್ತೇವೆ; ಹಾಗೆಯೇ ಈಶಾನ್ಯ ರಾಜ್ಯಗಳ ಆದ್ಯಂತ ಪಕ್ಷವನ್ನು ಬಲಪಡಿಸುವ ಪ್ರಯತ್ನವನ್ನು ಮುಂದುವರಿಸುತ್ತೇವೆ ಮತ್ತು ಜನರ ವಿಶ್ವಾಸವನ್ನು ಪುನರ್‌ ಸಂಪಾದಿಸುತ್ತೇವೆ. ಪಕ್ಷದ ಹೋರಾಟಕ್ಕಾಗಿ ಹಗಲಿರುಳು ಶ್ರಮಿಸಿದ ಪಕ್ಷದ ಕಾರ್ಯಕರ್ತರಿಗೆ ನನ್ನ ಪ್ರಾಮಾಣಿಕ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ’ ಎಂದು ರಾಹುಲ್‌ ಬರೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next