Advertisement

ರಕ್ಷಣಾ ಸಚಿವಾಲಯದ ಅಧಿಕಾರಿಗಳಿಗೆ ಲಂಚ: ಕ್ರಮಕ್ಕೆ ರಾಹುಲ್‌ ಒತ್ತಾಯ

03:44 PM May 31, 2018 | Team Udayavani |

ಹೊಸದಿಲ್ಲಿ : ವಿಮಾನದ ಬಿಡಿ ಭಾಗಗಳ ಖರೀದಿ ಸಂಬಂಧ ಭಾರತದ ರಕ್ಷಣಾ ಸಚಿವಾಲಯದ ಅಧಿಕಾರಿಗಳಿಗೆ ಕೋಟ್ಯಂತರ ಲಂಚ ನೀಡಲಾಗಿದೆ ಎಂಬ ಬಗ್ಗೆ ಉಕ್ರೇನ್‌ ತನಿಖೆ ನಡೆಸುತ್ತಿರುವ ಬಗ್ಗೆ ಪತ್ರಿಕಾ ವರದಿಗಳು ಪ್ರಕಟಗೊಂಡಿದ್ದು ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

Advertisement

“ಎಎನ್‌ 32 ವಹಿವಾಟಿನಲ್ಲಿ ಉಕ್ರೇನ್‌ ಸರಕಾರ ದುಬೈ ಮೂಲಕ ಭಾರತೀಯ ರಕ್ಷಣಾ ಸಚಿವಾಲಯದ ಅಧಿಕಾರಿಗಳಿಗೆ ಕೋಟ್ಯಂತರ ಡಾಲರ್‌ ಲಂಚ ಪಾವತಿಸಿರುವುದಾಗಿ ಆರೋಪಿಸಲಾಗಿದೆ’ ಎಂದು ರಾಹುಲ್‌ ಗಾಂಧಿ ಅವರು ಪತ್ರಿಕಾ ವರದಿಯೊಂದನ್ನು ಪ್ರಧಾನಿ ಮೋದಿ ಅವರಿಗೆ ಟ್ಯಾಗ್‌ ಮಾಡಿದ್ದಾರೆ.

“ಮೋದಿ ಜೀ, ನಮ್ಮ ಸ್ವಘೋಷಿತ ಚೌಕಿದಾರರಾಗಿರುವ ನೀವು ಭ್ರಷ್ಟ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ನಾನು ಆಗ್ರಹಿಸುತ್ತೇನೆ’ ಎಂದು ರಾಹುಲ್‌ ಗಾಂಧಿ ಅವರು  ಹ್ಯಾಶ್‌ಟ್ಯಾಗ್‌ ಡಿಫೆನ್ಸ್‌ ಸ್ಕ್ಯಾಮ್‌ ಬಳಸಿಕೊಂಡು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next