Advertisement

ಪಂಜಾಬ್‌ನಲ್ಲಿ ದಾಳಿ ; Bagalkot ಯೋಧ ಹುತಾತ್ಮ

10:18 PM Apr 12, 2023 | Team Udayavani |

ಬಾಗಲಕೋಟೆ : ಪಂಜಾಬನ ಬಟಿಂಡಾ ಮಿಲಿಟರಿ ಠಾಣೆಯ ಮೇಲೆ ನಡೆದ ದಾಳಿಯಲ್ಲಿ ಜಿಲ್ಲೆಯ ಬಾದಾಮಿ ತಾಲೂಕಿನ ಹನಮನೇರಿಯ ಗ್ರಾಮದ ಸೈನಿಕ‌ ವೀರಮರಣ ಹೊಂದಿದ್ದಾರೆ.

Advertisement

ಹುತಾತ್ಮರಾದ ಸೈನಿಕ ಹನಮನೇರಿ(ಇನಾಂ) ಗ್ರಾಮದ ಸಂತೋಷ ಮಲ್ಲಪ್ಪ ನಾಗರಾಳ (24) ಎನ್ನುವವರಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ‌ ಭಾರತೀಯ ಸೇನೆಯು ಪಂಜಾಬ್ ರೆಜಿಮೆಂಟ್ ನಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಬುಧವಾರ ಅಪರಿಚರು, ಪಂಜಾಬನ ಬಟಿಂಡಾ ಮಿಲಟರಿ‌‌ ಠಾಣೆಯ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಕರ್ತವ್ಯದಲ್ಲಿದ್ದ ಯೋಧ ಸಂತೋಷ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ‌ ಅಸುನೀಗಿದ್ದಾರೆ. ಪಾರ್ಥಿವ ಶರೀರ ಗುರುವಾರ ಗ್ರಾಮಕ್ಕೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಬಟಿಂಡಾ ಸೇನಾ ಘಟಕದೊಳಗೆ ಬುಧವಾರ ಮುಂಜಾನೆ ಈ ಘಟನೆ ನಡೆದಿರುವುದಾಗಿ ಆರ್ಮಿಯ ಸೌತ್ ವೆಸ್ಟರ್ನ್ ಕಮಾಂಡ್ ಪ್ರಕಟನೆಯಲ್ಲಿ ತಿಳಿಸಿದೆ. ದಾಳಿಯಲ್ಲಿ ನಾಲ್ವರು ಯೋಧರು ಮೃತಪಟ್ಟಿದ್ದು, ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next