Advertisement

Siruguppa ಹೊಸ ಪಡಿತರ ಚೀಟಿಗಾಗಿ ಸಾರ್ವಜನಿಕರ ಪರದಾಟ

09:58 PM Jul 08, 2024 | Team Udayavani |

ಸಿರುಗುಪ್ಪ: ತಾಲೂಕಿನಲ್ಲಿ ಕಳೆದ ವಾರ 2ದಿನ ಮಾತ್ರ ಹೊಸ ಪಡಿತರ ಚೀಟಿ ಮಾಡಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು, ಹೊಸ ಪಡಿತರ ಚೀಟಿಗಾಗಿ ಪಡಿತರ ಇಲಾಖೆಗೆ ಅರ್ಜಿ ಸಲ್ಲಿಸಿದ ಸಾರ್ವಜನಿಕರು ಹೊಸ ಪಡಿತರ ಚೀಟಿಯನ್ನು ಪಡೆಯಲು ನಗರದಲ್ಲಿರುವ ಆಹಾರ ಇಲಾಖೆಗೆ ಅಲೆದಾಡುತ್ತಿದ್ದಾರೆ.

Advertisement

ಸರ್ಕಾರ ಹೊಸ ಪಡಿತರ ಚೀಟಿ ಮಾಡಿಸಲು 2 ದಿನ ಮಾತ್ರ ಅವಕಾಶ ಮಾಡಿಕೊಟ್ಟಿದ್ದು, ಹೊಸ ಪಡಿತರ ಚೀಟಿ ಮಾಡಿಸಿಕೊಂಡ ತಾಲೂಕಿನ 27 ಗ್ರಾಮ ಪಂಚಾಯಿತಿ ವ್ಯಾಪ್ತಿಯ 84 ಗ್ರಾಮಗಳ ಜನರು ಪಡಿತರ ಇಲಾಖೆಗೆ ಬರುತ್ತಿದ್ದು, ಪಡಿತರ ಇಲಾಖೆಯ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಸದ್ಯ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ ಅರ್ಜಿದಾರರ ಮನೆಗೆ ತೆರಳಿ ಪರಿಶೀಲನೆ ಮಾಡಿದ ನಂತರ ಹೊಸ ಪಡಿತರ ಚೀಟಿಯನ್ನು ನೀಡುವಂತೆ ಸರ್ಕಾರ ಆದೇಶ ನೀಡಿರುತ್ತದೆ.

ಆದರೆ ಸರ್ಕಾರದ ಈ ಆದೇಶದ ಬಗ್ಗೆ ಮಾಹಿತಿ ತಿಳಿಯದ ಸಾರ್ವಜನಿಕರು ಕಳೆದ 3-4 ದಿನಗಳಿಂದ ನೂರಾರು ಸಂಖ್ಯೆಯಲ್ಲಿ ಆಹಾರ ಇಲಾಖೆಗೆ ಬರುವುದು ಸಾಮಾನ್ಯವಾಗಿದೆ.

ಹೊಸ ಪಡಿತರ ಚೀಟಿ ಮಾಡಿಸಿದ್ದು, ಪಡಿತರ ಚೀಟಿಯನ್ನು ನಮಗೆ ಕೊಡುತ್ತಾರೆ ಎಂದು ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಆನ್‌ಲೈನ್ ಅಂಗಡಿಗಳ ಮಾಲೀಕರು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿರುವುದರಿಂದ ಸಾರ್ವಜನಿಕರು ಮಾಡಬೇಕಾದ ಕೆಲಸ ಕಾರ್ಯಗಳನ್ನು ಬಿಟ್ಟು ನಗರದಲ್ಲಿರುವ ಆಹಾರ ಇಲಾಖೆಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ನಾವು ಹೊಸಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು, ಹೊಸ ಪಡಿತರ ಚೀಟಿ ಪಡೆಯಲು ಕಛೇರಿಗೆ ಬಂದಿದ್ದೇವೆ, ಆದರೆ ಹೊಸ ಪಡಿತರ ಚೀಟಿ ಕೊಡಲು ಅಧಿಕಾರಿಗಳು ಮನೆಗೆ ಬಂದು ಪರಿಶೀಲನೆ ಮಾಡಿ ನೀಡುವುದಾಗಿ ತಿಳಿಸಿದ್ದಾರೆ ಎಂದು ಬಂಡ್ರಾಳ್ ಗ್ರಾಮದ ಗೋವಿಂದ ತಿಳಿಸಿದ್ದಾರೆ.

ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರ ಮನೆಗೆ ತೆರಳಿ ಪರಿಶೀಲನೆ ನಡೆಸಿ ಹೇಳಿಕೆ ಪಡೆದು ನಂತರ ಪಡಿತರ ಚೀಟಿಯನ್ನು ವಿತರಿಸುವಂತೆ ಸರ್ಕಾರದಿಂದ ಆದೇಶ ಬಂದಿದೆ. ಆದರೆ ಇದರ ಬಗ್ಗೆ ಮಾಹಿತಿ ತಿಳಿಯದ ಸಾರ್ವಜನಿಕರು ನಮ್ಮ ಕಛೇರಿಗೆ ಬರುತ್ತಿದ್ದಾರೆ ಎಂದು ಆಹಾರ ಇಲಾಖೆಯ ಶಿರಸ್ತೆದಾರ ಟಿ.ಮಹೇಶ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next