Advertisement

ಪಿಎಸ್ಐ ಅಕ್ರಮ ಹಗರಣ: ಶಿರಸಿಯಲ್ಲಿ ಮತ್ತೋರ್ವನನ್ನು ವಶಕ್ಕೆ ಪಡೆದ ಸಿಐಡಿ

04:17 PM Jul 12, 2022 | Team Udayavani |

ಬೆಂಗಳೂರು: ಪಿಎಸ್ ಐ ಅಕ್ರಮ ಹಗರಣ ಸಂಬಂಧ ಡಿವೈಎಸ್ ಪಿ ಶಾಂತಕುಮಾರ್ ಜೊತೆ ಭಾಗಿಯಾಗಿದ್ದ ಗಣಪತಿ ಭಟ್ ಎಂಬಾತನನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ

Advertisement

62 ವರ್ಷ ಪ್ರಾಯದ ಗಣಪತಿ ಭಟ್ ಅವರನ್ನು ಶಿರಸಿಯ ಹೇರೂರು ಬಳಿ ವಶಕ್ಕೆ ಪಡೆದ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗಣಪತಿ ಭಟ್ ಅವರು ಡಿವೈಎಸ್ ಪಿ ಶಾಂತಕುಮಾರ ಜೊತೆ ಸೇರಿ ಅಭ್ಯರ್ಥಿಗಳ ಬಳಿ ಡೀಲ್ ಕುದುರಿಸುವ ಕೆಲಸ ಮಾಡಿದ್ದ ಎನ್ನಲಾಗಿದೆ.

ಪಿಎಸ್ ಐ ಅಕ್ರಮ ಸಂಬಂಧ ಇತ್ತೀಚೆಗೆ ಸಿಐಡಿ ಪೊಲೀಸರು ಎಐಡಿಜಿ ಅಮೃತ್ ಪೌಲ್ ಅವರನ್ನು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next