Advertisement

ಪಿಎಸ್ಐ ನೇಮಕಾತಿ ಅಕ್ರಮ: ನೇಮಕಾತಿ ಎಡಿಜಿಪಿ ಅಮೃತ್ ಪಾಲ್ ಎತ್ತಂಗಡಿ

02:49 PM Apr 27, 2022 | Team Udayavani |

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಆರೋಪ ಹಿನ್ನಲೆ ನೇಮಕಾತಿ ಎಡಿಜಿಪಿ ಅಮೃತ್ ಪಾಲ್ ಅವರನ್ನು ಸರಕಾರ ಬುಧವಾರ ಎತ್ತಂಗಡಿ ಮಾಡಿದೆ.

Advertisement

ಅಮೃತ್ ಪಾಲ್ ಅವರನ್ನು ಬೆಂಗಳೂರು ಆಂತರಿಕ‌ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಿ ಸರ್ಕಾರದ ಆದೇಶ ಹೊರಡಿಸಿದ್ದು, ಆರ್.ಹಿತೇಂದ್ರ ಅವರನ್ನು ನೇಮಕಾತಿ ಎಡಿಜಿಪಿಯಾಗಿ ನೇಮಕ ಮಾಡಿರುವ ಸರಕಾರ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಿದೆ.

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ತಲೆಮರೆಸಿಕೊಂಡಿರುವ ಮಾಸ್ಟರ್ ಮೈಂಡ್ ಆಗಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸೇರಿ ಆರು ಜನರಿಗೆ ಅರೆಸ್ಟ್ ವಾರಂಟ್ ಜಾರಿ ಮಾಡಲಾಗಿದೆ. ತನಿಖೆಗೆ ಸಿಐಡಿಯ 6 ವಿಶೇಷ ತಂಡ ರಚನೆಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next