Advertisement

ನಿರಂತರ ನೀರು ಸರಬರಾಜು ಮಾಡಿ

05:13 PM May 12, 2022 | Team Udayavani |

ಮುದಗಲ್ಲ: ಸ್ಥಳೀಯ ಪಟ್ಟಣದಲ್ಲಿ ಕಳೆದ 1 ವರ್ಷದಿಂದ 24×7 ಕುಡಿಯುವ ನೀರಿನ ಯೋಜನೆ ಅನುಷ್ಠಾನ ಗೊಂಡಿದ್ದು ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇರುವುದರಿಂದ ತ್ವರಿತಗತಿಯಲ್ಲಿ ಯೋಜನೆಗೆ ಕ್ರಮ ಕೈಗೊಳ್ಳುವಂತೆ ಕೆಯುಡಿಎಫ್‌ನ ಅಧಿಕಾರಿಗಳ ಜತೆ ಬುಧವಾರ ಶಾಸಕ ಹೂಲಗೇರಿ ಚರ್ಚೆ ಮಾಡಿದರು.

Advertisement

ಪಟ್ಟಣಕ್ಕೆ 7-8 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಬಗ್ಗೆ ನಮ್ಮ ಕಚೇರಿಗೆ ಸಾಕಷ್ಟು ದೂರುಗಳು ಬಂದಿದೆ. ಕೂಡಲೇ ಅಧಿಕಾರಿಗಳು ನೀರಿನ ಸಮರ್ಪಕ ಯೋಜನೆ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next