Advertisement

ಸಾಕ್ಷ್ಯ ಕೊಡಿ: ಚೀನಾ

12:30 AM Feb 19, 2019 | |

ಜೈಶ್‌ ಎ ಮೊಹಮ್ಮದ್‌ ಉಗ್ರ ಮಸೂದ್‌ ಅಜರ್‌ ಬಗ್ಗೆ ಸೂಕ್ತ ಸಾಕ್ಷ್ಯ ನೀಡುವಲ್ಲಿ ಭಾರತ ವಿಫ‌ಲವಾಗಿದೆ. ಹೀಗಾಗಿ ತನ್ನ ನೆಲದಲ್ಲಿ ನಡೆಯುವ ಭಯೋತ್ಪಾದನೆಗೆ ಸಾಕ್ಷ್ಯವಿಲ್ಲದೆ ಪಾಕಿಸ್ಥಾನವನ್ನು ಹೊಣೆ ಮಾಡಬಾರದು. ಅಷ್ಟೇ ಅಲ್ಲ, ವಿಶ್ವಸಂಸ್ಥೆಯಲ್ಲಿ ಅಜರ್‌ನನ್ನು ಉಗ್ರ ಎಂದು ಘೋಷಿಸುವ ಪ್ರಯತ್ನಕ್ಕೆ ಚೀನಾ ತಡೆಯೊಡ್ಡುತ್ತಿದೆ ಎಂದು ಆರೋಪಿಸುವುದನ್ನೂ ನಿಲ್ಲಿಸಬೇಕು ಎಂದು ಚೀನಾ ಸರಕಾರದ ಮುಖವಾಣಿ ಗ್ಲೋಬಲ್‌ ಟೈಮ್ಸ್‌ನಲ್ಲಿ ವರದಿ ಮಾಡಲಾಗಿದೆ. ಪಾಕಿಸ್ಥಾನ ಹಾಗೂ ಚೀನಾ ವಿರುದ್ಧ ಆರೋಪ ಮಾಡುವುದರ ಬದಲಿಗೆ, ಭಾರತ ತನ್ನ ಭಯೋತ್ಪಾದನೆ ತಡೆ ನೀತಿಯನ್ನು ಯಾಕೆ ಮರು ರೂಪಿಸಿಕೊಳ್ಳಬಾರದು? ಭಾರತದ ಕಾಶ್ಮೀರ ಭಾಗದಲ್ಲಿ ಯಾಕೆ ಆಡಳಿತವನ್ನು ಸುಧಾರಿಸಿಕೊಳ್ಳ ಬಾರದು ಎಂದು ಪ್ರಶ್ನಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next