Advertisement

ವಿಜಯಸಿಂಗ್‌ ಗೆ ತಪ್ಪಿದ ಟಿಕೆಟ್‌-ಪ್ರತಿಭಟನೆ

08:08 PM Mar 24, 2021 | Team Udayavani |

ಬಸವಕಲ್ಯಾಣ: ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್‌ ಅವರಿಗೆ ಟಿಕೆಟ್‌ ನೀಡದಿರುವುದನ್ನು ಖಂಡಿಸಿ ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

Advertisement

ವಿಜಯಸಿಂಗ್‌ ಅವರಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಕೇಳಿದರೂ ನೀಡಲಿಲ್ಲ. ಈಗ ಕ್ಷೇತ್ರದಲ್ಲಿ ಎದುರಾಗಿರುವ ಉಪ ಚುನಾವಣೆಯಲ್ಲಿ ಪಕ್ಷದ ಹೈಕಮಾಂಡ್‌ಗೆ ಟಿಕೆಟ್‌ ನೀಡುವಂತೆ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಕ್ಷದ ಸಂಘಟನೆಗೆ ನಿರಂತರ ದುಡಿಯುತ್ತಿರುವ ವಿಜಯಸಿಂಗ್‌ ಅವರಿಗೆ ಪದೇ ಪದೇ ಅನ್ಯಾಯವಾಗುತ್ತಿದೆ. ಉಪ ಚುನಾವಣೆಯಲ್ಲಿ ಅವರು ಪ್ರಬಲ ಆಕಾಂಕ್ಷಿಯಾಗಿದ್ದರೂ ಟಿಕೆಟ್‌ ನೀಡಿಲ್ಲ. ಮುಂದಿನ ದಿನಗಳಲ್ಲಿ ಹೀಗಾದಂತೆ ವರಿಷ್ಠರು ಮುಂಜಾಗ್ರತೆ ವಹಿಸಬೇಕೆಂದು ಡಿ.ಕೆ. ಶಿವಕುಮಾರ ಅವರಿಗೆ ಬರೆದ ಮನವಿ ಪತ್ರ ತಾಲೂಕು ಉಪಾಧ್ಯಕ್ಷ ಡಿ.ಕೆ. ದಾವುದ್‌ಗೆ ಸಲ್ಲಿಸಿದರು.\

ಪಕ್ಷದ ಪ್ರಧಾನ ಕಾರ್ಯದರ್ಶಿ ಸೋನುಸಿಂಗ್‌ ಹಜಾರಿ ಮಾತನಾಡಿ, ಬಿ.ನಾರಾಯಣರಾವ್‌ ನಿಧನದ ನಂತರ ಕಾರ್ಯಕರ್ತರ ಸಮಸ್ಯೆ ಆಲಿಸಲು ಯಾರೂ ಇರಲಿಲ್ಲ. ಅಂಥಹ ಸಂದರ್ಭದಲ್ಲಿ ವಿಜಯಸಿಂಗ್‌ ಪ್ರತಿ ಹಳ್ಳಿಹಳ್ಳಿಗೂ ತಿರುಗಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಕೆಲಸ ಮಾಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಯೋಗೇಶ ಗುತ್ತೆದಾರ, ಸೈಯದ್‌ ಇಫೆ¤ಕಾರ, ಬಾಬುಸಿಂಗ್‌ ಹಜಾರಿ, ಸಂತೋಷ ಗುತ್ತೆದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next